ಬಿಜೆಪಿ ಸೇರಲು ಮುಂದಾದ ಎಪಿ ಅಬ್ದುಲ್ಲಾ ಕುಟ್ಟಿ
ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡಿದ್ದ ಮಾಜಿ ಸಂಸದ
ಹೊಸದಿಲ್ಲಿ, ಜೂ.24: ಕಾಂಗ್ರೆಸ್ನಿಂದ ಅಮಾನತುಗೊಂಡ ಕೇರಳದ ಕಣ್ಣೂರಿನ ಮಾಜಿ ಸಂಸದ ಎ.ಪಿ. ಅಬ್ದುಲ್ಲಾ ಕುಟ್ಟಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ತಾನು ಬಿಜೆಪಿ ಸೇರಲು ಮುಂದಾಗಿದ್ದೇನೆ ಎಂದವರು ಹೇಳಿದ್ದಾರೆ.
ತಾನು ಸಂಸತ್ ನಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ಅಬ್ದುಲ್ಲಾ ಕುಟ್ಟಿ ಹೇಳಿದ್ದಾರೆ.
ಸಿಪಿಎಂ ಉಚ್ಛಾಟಿಸಿದ ಬಳಿಕ ಕಾಂಗ್ರೆಸ್ ಸೇರಿದ್ದ ಅಬ್ದುಲ್ಲಾ ಕುಟ್ಟಿ ಕಣ್ಣೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಇತ್ತೀಚೆಗಷ್ಟೇ ಮೋದಿಯನ್ನು ಹೊಗಳಿದ್ದ ಇವರನ್ನು ಕಾಂಗ್ರೆಸ್ ಕೂಡ ಪಕ್ಷದಿಂದ ಹೊರಹಾಕಿತ್ತು.
Next Story