ಆ್ಯಂಬುಲೆನ್ಸ್ ದೊರೆಯದೆ ಮಗನ ಮೃತದೇಹವನ್ನು ಹೆಗಲಲ್ಲಿ ಹೊತ್ತೊಯ್ದ ತಂದೆ
ನಲಂದಾ, ಜೂ.26: ಇಲ್ಲಿನ ಸರಕಾರಿ ಸದರ್ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ದೊರೆಯದೆ ವ್ಯಕ್ತಿಯೊಬ್ಬ ತನ್ನ ಎಂಟು ವರ್ಷ ಪ್ರಾಯದ ಪುತ್ರನ ಮೃತದೇಹವನ್ನು ಹೆಗಲಿನಲ್ಲಿಯೇ ಹೊತ್ತುಕೊಂಡು ಹೋದ ಮನಕಲಕುವ ಘಟನೆ ಮಂಗಳವಾರ ನಡೆದಿದೆ.
ಬಾಲಕನಿಗೆ ವಿಪರೀತ ಜ್ವರ ಹಾಗೂ ಹೊಟ್ಟೆ ನೋವು ಕಾಡುತ್ತಿದ್ದುದರಿಂದ ಆತನ ತಂದೆ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದ.
ಆ್ಯಂಬುಲೆನ್ಸ್ ದೊರೆಯದೇ ಇರುವ ಕುರಿತಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಯೋಗೇಂದ್ರ ಸಿಂಗ್ ಹೇಳಿದ್ದಾರೆ.
Next Story