ಐಎಂಎ ವಂಚನೆ ಪ್ರಕರಣ: ಧರ್ಮಗುರು ಬಂಧನ
ಬೆಂಗಳೂರು, ಜು.11: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಸೀದಿಯ ಧರ್ಮಗುರು ಒಬ್ಬರನ್ನು ತನಿಖಾಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಶಿವಾಜಿನಗರದ ರಸ್ತೆಯಲ್ಲಿರುವ ಬೇಪಾರಿ ಮಸೀದಿಯ ಧರ್ಮಗುರು ಹನೀಫ್ ಅಫ್ಸರ್ ಅಝೀಝ್ ಬಂಧಿತ ಆರೋಪಿ ಎಂದು ಸಿಟ್ ತಿಳಿಸಿದೆ.
ಅಝೀಝ್ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರಚಾರ ಮಾಡುತ್ತಿದ್ದ. ಜೊತೆಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆ ಬಂಧಿಸಲಾಗಿದೆ ಎಂದು ಸಿಟ್ ಮೂಲಗಳು ತಿಳಿಸಿವೆ.
3 ಕೋಟಿ ಪಡೆದ ಧರ್ಮಗುರು !
ಐಎಂಎ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಖಾನ್ ನಿಂದ 2017 ನೇ ಸಾಲಿನಲ್ಲಿ ನಗರದ ಎಚ್ ಬಿಆರ್ ಲೇಔಟ್ ನಲ್ಲಿ 3 ಕೋಟಿ ರೂ. ಮೌಲ್ಯದ ಮನೆಯೊಂದನ್ನು ಬಂಧಿತ ಧರ್ಮಗುರು ಹನೀಫ್ ಅಫ್ಸರ್ ಅಝೀಝ್ ಉಡುಗೊರೆ ರೂಪದಲ್ಲಿ ಪಡೆದಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದೆ.
Next Story