ವಿಶ್ವಾಸಮತ ಯಾಚನೆ ಹಿನ್ನೆಲೆ: ಅತೃಪ್ತ ಶಾಸಕರಿಗೂ ವಿಪ್ ಜಾರಿ
ಬೆಂಗಳೂರು, ಜು.16: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.18 ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿರುವ ಹಿನ್ನೆಲೆಯಲ್ಲಿ ಶಾಸಕರ ಭವನದಲ್ಲಿರುವ ಅತೃಪ್ತ ಶಾಸಕರ ಕೊಠಡಿಗಳ ಬಾಗಿಲುಗಳಿಗೆ ವಿಪ್ ಪ್ರತಿಗಳನ್ನು ಅಂಟಿಸಲಾಗಿದೆ.
ಅತೃಪ್ತ ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ, ಮುಂಬೈನಲ್ಲಿ ಖಾಸಗಿ ಹೊಟೇಲ್ನಲ್ಲಿ ತಂಗಿದ್ದಾರೆ. ಆದರೆ, ಈವರೆಗೆ ಅವರ ರಾಜೀನಾಮೆಗಳನ್ನು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅಂಗೀಕರಿಸದೆ ಇರುವುದರಿಂದ, ಅವರ ಕೊಠಡಿಗಳ ಬಾಗಿಲುಗಳಿಗೆ ವಿಪ್ ಪ್ರತಿಗಳನ್ನು ಅಂಟಿಸಲಾಗಿದೆ.
Next Story