ಕಟ್ಟಡ ಕುಸಿತ ಪ್ರಕರಣ: ಸಿವಿಲ್ ಇಂಜಿನಿಯರ್ಗಳಿಬ್ಬರ ಬಂಧನ
ಬೆಂಗಳೂರು, ಜು.17: ಇಲ್ಲಿನ ಮಾರುತಿ ಸೇವಾ ನಗರದಲ್ಲಿ ಕಳಪೆ ಗುಣಮಟ್ಟದ 3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿವಿಲ್ ಇಂಜಿನಿಯರ್ಗಳನ್ನು ಪುಲಿಕೇಶಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಟ್ಟದ ನಿರ್ಮಾಣದ ಮೇಲ್ವಿಚಾರಕರಾಗಿದ್ದ ತಮೀಮ್ ಮತ್ತು ನಯಾಝ್ ಎಂಬುವರು ಬಂಧಿತ ಇಂಜಿನಿಯರ್ಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಜಿನಿಯರ್ಗಳಿಬ್ಬರು ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದರು. ಹೀಗಾಗಿ ಇವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಟ್ಟಡದ ಮಾಲಕ ಹಾಗೂ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Next Story