ಮಣಿಪಾಲ: ದುಷ್ಕರ್ಮಿಗಳಿಂದ ಪಬ್ ನಲ್ಲಿ ದಾಂಧಲೆ
ಉಡುಪಿ, ಆ.12: ಮಣಿಪಾಲ ವಿದ್ಯಾರತ್ನ ನಗರದಲ್ಲಿರುವ ರಿಮಿಕ್ಸ್ ಪಬ್ಗೆ ಆ.11ರ ರಾತ್ರಿ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ದಾಂಧಲೆ ನಡೆಸಿದ ಘಟನೆ ನಡೆದಿದೆ.
4 ಕಾರುಗಳಲ್ಲಿ ಆಗಮಿಸಿದ 10ರಿಂದ 12 ಮಂದಿಯ ಗುಂಪು ಪಬ್ನ ಬೌನ್ಸರ್ಗಳಿಗೆ ಹಲ್ಲೆ ನಡೆಸಿ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಕೊಲೆಯ ಯತ್ನ ನಡೆಸಿದ್ದಾರೆ. ಪಬ್ ಒಳಗಿದ್ದ ಅಕ್ವೇರಿಯಂ, ಬಾರ್ ಕೌಂಟರ್, ಹಾಗೂ ಕಂಪ್ಯೂಟರ್ಗೆ ಹಾನಿ ಮಾಡಿದ್ದಾರೆ.
ಪಬ್ ನಡೆಸುವ ಉಪ್ಪೂರು ನಿವಾಸಿ ಪ್ರಜ್ವಲ್ ಎಂಬವರ ಚಿನ್ನದ ಸರ ಎಳೆದುಕೊಂಡು, ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story