ನಮ್ಮದೂ ಒಂದು ರೀತಿಯ ಸಮ್ಮಿಶ್ರ ಸರಕಾರದಂತಿದೆ: ಸಚಿವ ವಿ.ಸೋಮಣ್ಣ
ದಸರಾ ಗಜಪಯಣಕ್ಕೆ ಚಾಲನೆ
ಮೈಸೂರು: ನಮ್ಮದು ದೊಡ್ಡ ಪಕ್ಷ, ನಮ್ಮಲ್ಲಿ ಗೆದ್ದಿರುವವರು ಸಾಕಷ್ಟು ಶಾಸಕರಿದ್ದಾರೆ. ಒಂದು ರೀತಿಯಲ್ಲಿ ನಮ್ಮದೂ ಸಮ್ಮಿಶ್ರ ಸರ್ಕಾರ ಇದ್ದಂತೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಲ್ಲಿ ಗುರುವಾರ ದಸರಾ ಗಜಪಯಣಕ್ಕೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಮ್ಮದು ಸಮ್ಮಿಶ್ರ ಸರಕಾರ ಇದ್ದಂತೆ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ, ಹಾಗಾಗಿ ಮುಖ್ಯಮಂತ್ರಿಗಳ ವಿವೇಚನೆಗೆ ತಕ್ಕಂತೆ ಮಂತ್ರಿಮಂಡಲ ರಚನೆ ಮಾಡಲಾಗಿದೆ ಎಂದರು.
ಈಗ 17 ಜನರಿಗೆ ಸಚಿವರಾಗುವ ಅವಕಾಶ ಲಭಿಸಿದೆ ಮುಂದೆ ಬೇರೆಯವರಿಗೂ ಸಿಗಲಿದೆ. ಶಾಸಕ ರಾಮದಾಸ್ ಅವರು ನಾಲ್ಕು ಬಾರಿ ಶಾಸಕರಾಗಿದ್ದಾರೆ ಅಂತವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಲಭಿಸಲಿದೆ ಎಂದು ಹೇಳಿದರು.
Next Story