ನೂತನ ಸಚಿವರಿಗೆ ವಸತಿ ಗೃಹಗಳ ಹಂಚಿಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.22: ರಾಜ್ಯ ಸರಕಾರವು 13 ಮಂದಿ ನೂತನ ಸಚಿವರಿಗೆ ಬೆಂಗಳೂರಿನಲ್ಲಿರುವ ಸರಕಾರಿ ವಸತಿ ಗೃಹಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶದಂತೆ ಹಂಚಿಕೆ ಮಾಡಿ ಗುರುವಾರ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ-ನಂ.2, ರೇಸ್ ವ್ಯೆ ಕಾಟೇಜ್, ರೇಸ್ ಕೋರ್ಸ್ ರಸ್ತೆ, ಜೆ.ಸಿ.ಮಾಧುಸ್ವಾಮಿ-ನಂ.4, ರೇಸ್ಕೋರ್ಸ್ ರಸ್ತೆ, ಕೆ.ಎಸ್.ಈಶ್ವರಪ್ಪ-ನಂ.2, ಕೆ.ಕೆ.ದಕ್ಷಿಣ, ಬೆಂಗಳೂರು, ಗೋವಿಂದ ಕಾರಜೋಳ-ನಂ.2, ಕ್ರೆಸೆಂಟ್ ರಸ್ತೆ, ಜಗದೀಶ್ ಶೆಟ್ಟರ್-ನಂ.3, ಕ್ರೆಸೆಂಟ್ ರಸ್ತೆ, ಡಾ.ಸಿ.ಎನ್.ಅಶ್ವಥ್ ನಾರಾಯಣ-ನಂ.1, ರೇಸ್ ವ್ಯೆ ಕಾಟೇಜ್, ರೇಸ್ ಕೋರ್ಸ್ ರಸ್ತೆ. ಸಿ.ಟಿ.ರವಿ-ನಂ.1, ಸಪ್ತ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ವಿ.ಸೋಮಣ್ಣ-ನಂ.3, ಸಪ್ತ ಸಚಿವರ ನಿವಾಸ, ಬಿ.ಶ್ರೀರಾಮುಲು-ನಂ.6, ಸಪ್ತ ಸಚಿವರ ನಿವಾಸ, ಲಕ್ಷ್ಮಣ ಸವದಿ-ನಂ.7, ಸಪ್ತ ಸಚಿವರ ನಿವಾಸ, ಸಿ.ಸಿ.ಪಾಟೀಲ್-ನಂ.30, ಸ್ಯಾಂಕಿ ರಸ್ತೆ, ಕೋಟಾ ಶ್ರೀನಿವಾಸ ಪೂಜಾರಿ-ನಂ.31, ಸ್ಯಾಂಕಿ ರಸ್ತೆ, ಶಶಿಕಲಾ ಜೊಲ್ಲೆ-ನಂ.1, ಜಯಮಹಲ್ ಬಡಾವಣೆ ಇಲ್ಲಿಗೆ ವಸತಿ ಗೃಹಗಳನ್ನು ಹಂಚಿಕೆ ಮಾಡಲಾಗಿದೆ.