ಎಸ್ಸೆಸ್ಸೆಫ್ ಬದ್ಯಾರ್ ಶಾಖೆಯ ವತಿಯಿಂದ ಧ್ವಜ ದಿನಾಚರಣೆ
ಬೆಳ್ತಂಗಡಿ, ಸೆ.23: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಧ್ವಜ ದಿನಾಚರಣೆಯ ಪ್ರಯುಕ್ತ ಎಸ್ಸೆಸ್ಸೆಫ್ ಬದ್ಯಾರ್ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಬದ್ರಿಯಾ ಜುಮ್ಮಾ ಮಸೀದಿ ಬದ್ಯಾರ್ ಇದರ ಆವರಣದಲ್ಲಿ ಇತ್ತೀಚೆಗೆ ಜಮಾಅತ್ ಅಧ್ಯಕ್ಷ ಅಬೂಬಕರ್ ರವರ ನೇತೃತ್ವದಲ್ಲಿ ನಡೆಯಿತು.
ಪ್ರಾರ್ಥನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಡಿಸಿದ ಸ್ಥಳೀಯ ಖತೀಬ್ ಅನ್ಸಾರ್ ಸಖಾಫಿ ಮುಕ್ವೆ ಉಸ್ತಾದ್ ಅವರು, ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಎಸ್ಸೆಸ್ಸೆಫ್ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯನ್ನು ಮಾಡಿದೆ. ಇಸ್ಲಾಮಿನ ಸಾಂಪ್ರದಾಯಿಕ ಮೌಲ್ಯವನ್ನು ಎತ್ತಿ ಹಿಡಿಯಲು ಯುವ ಸಮೂಹವು ಎಸ್ಸೆಸ್ಸೆಫ್ ಜೊತೆ ಕೈ ಜೋಡಿಸಬೇಕೆಂದು ಹೇಳಿದರು.
ಬದ್ಯಾರ್ ಸಿರಾಜುಲ್ ಇಸ್ಲಾಂ ಮದರಸ ಮುಅಲ್ಲಿಮರಾದ ಅಬ್ದುಲ್ ರಶೀದ್ ಮದನಿ ನಾಳ, ಹಮೀದ್ ಮುಸ್ಲಿಯಾರ್ ನಾಳ, ಜಮಾಅತ್ ಪ್ರಧಾನ ಕಾರ್ಯದರ್ಶಿ BH ಅಬ್ಬಾಸ್ ಬರಾಯ, ಕೋಶಾಧಿಕಾರಿ ಕಾಸಿಂ ಎಂಗೋಡಿ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಬದ್ಯಾರ್, SYS ಬದ್ಯಾರ್ ಶಾಖೆಯ ಅದ್ಯಕ್ಷ ಹೈದರ್ ಮುಸ್ಲಿಯಾರ್, ಎಸ್ಸೆಸ್ಸೆಫ್ ಬದ್ಯಾರ್ ಶಾಖೆಯ ಕೋಶಾಧಿಕಾರಿ ಮುಹಮ್ಮದ್ ಬರಾಯ ಸಹಿತ ಎಸ್ಸೆಸ್ಸೆಫ್, ಎಸ್ವೈಸ್ ನ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜಮಾಅತ್ ಪ್ರಧಾನ ಕಾರ್ಯದರ್ಶಿ BH ಅಬ್ಬಾಸ್ ಬರಾಯ ಸ್ವಾಗತಿಸಿ, ಎಸ್ಸೆಸ್ಸೆಫ್ ಬದ್ಯಾರ್ ಶಾಖೆಯ ಕಾರ್ಯದರ್ಶಿ ಇರ್ಶಾದ್ ಪೊಟ್ಟುಕೆರೆ ಧನ್ಯವಾದ ಅರ್ಪಿಸಿದರು.