ಉಡುಪಿ ಮಠಾಧೀಶರಿಂದ ಹರಿನಾಮ ಸಂಕೀರ್ತನೆ
ಉಡುಪಿ, ಅ.9: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಅಖಂಡ ಜನೆಯಲ್ಲಿಉಡುಪಿಅಷ್ಟಮಠಗಳವಿವಿ ಮಠಾಧೀಶರು ಮಂಗಳವಾರ ಹರಿನಾಮ ಸಂಕೀರ್ತನೆಗಳನ್ನು ಹಾಡಿದರು.
ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು, ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥರು ಹಾಗೂ ಪಲಿಮಾರು ಮಠದ ಕಿರಿಯರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥರು ತಾಳಬದ್ಧರಾಗಿ ದಾಸರ ಪದಗಳನ್ನು ಹಾಡಿದರು.
Next Story