ಎಸ್ಎಂಎ ದ.ಕ. ಜಿಲ್ಲೆ ಪಶ್ಚಿಮ ವಿಭಾಗದ ಅಧ್ಯಕ್ಷರಾಗಿ ಇಕ್ಬಾಲ್ ಕೃಷ್ಣಾಪುರ ಆಯ್ಕೆ
ಇಕ್ಬಾಲ್ ಕೃಷ್ಣಾಪುರ
ಮಂಗಳೂರು: ಎಸ್ ಎಂ ಎ ದ.ಕ.ಜಿಲ್ಲೆ ವೆಸ್ಟ್ ವಿಭಾಗ ಇದರ ವಾರ್ಷಿಕ ಕೌನ್ಸಿಲ್ ಸಭೆ ಇತ್ತೀಚೆಗೆ ಪಡೀಲ್ ನಲ್ಲಿ ನಡೆಯಿತು.
ಕತರ್ ಬಾವ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮದನಿ ಜೆಪ್ಪು ರಿಟೈನಿಂಗ್ ಆಫೀಸರ್ ಆಗಿ ಆಗಮಿಸಿದ್ದರು.
ಅಧ್ಯಕ್ಷರಾಗಿ ಬಿ.ಎ. ಇಕ್ಬಾಲ್ ಕೃಷ್ಣಾಪುರ ಸರ್ವಾನುಮತದಿಂದ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಖಲೀಲ್ ಮುಸ್ಲಿಯಾರ್, ಕೋಶಾಧಿಕಾರಿಯಾಗಿ ಬಶೀರ್ ಅಹ್ಮದ್ ಪಂಜಿಮೊಗರು, ಉಪಾಧ್ಯಕ್ಷರಾಗಿ ಎಸ್ .ಎಸ್ ಮೂಸ ಹಾಜಿ ಮುಡಿಪು, ಪಿಎಂ. ಮುಹಮ್ಮದ್ ಮದನಿ, ಕೆ.ಸಿ.ರೋಡ್, ಸಲೀಲ್ ಹಾಜಿ ಬಜ್ಪೆ, ಎನ್.ಎಸ್ ಉಮರ್ ಮಾಸ್ಟರ್, ಕಾರ್ಯದರ್ಶಿಗಳಾಗಿ ಬಾವ ಫಖ್ರುದ್ದೀನ್ ಕೃಷ್ಣಾಪುರ, ಅಬ್ದುಲ್ ರಝಾಕ್ ಸಖಾಫಿ ಕೊಳಕೆ, ಬಿ.ಎಚ್ ಇಸ್ಮಾಯಿಲ್ ಕೆ.ಸಿ.ರೋಡ್, ಉಮರ್ ಫಾರೂಕ್ ಶೇಡಿಗುರಿ, ಪತ್ರಿಕಾ ಕಾರ್ಯದರ್ಶಿಯಾಗಿ ಬಶೀರ್ ಕಲ್ಕಟ್ಟ ಹಾಗೂ ಇತರ 22 ಮಂದಿಯನ್ನು ಕಾರ್ಯಕಾರಿ ಸಮಿತಿ ಸಭೆಗೆ ಆರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ, ಶಾಫಿ ಮದನಿ ಕರಾಯ ವಂದಿಸಿದರು.