ಸಿಡಿಲಿಗೆ ಅಸ್ವಸ್ಥ, ಎಂಡೋಸಲ್ಫಾನ್ ಪೀಡಿತ ಮೃತ್ಯು
ಹೆಬ್ರಿ, ಅ.9: ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಕಾಣಿಸಿಕೊಂಡ ಭಾರೀ ಸಿಡಿಲು ಮತ್ತು ಮಿಂಚಿಗೆ ಅಸ್ವಸ್ಥಗೊಂಡ ಎಂಡೋಸಲ್ಫಾನ್ ಪೀಡಿತ ವ್ಯಕ್ತಿಯೊಬ್ಬರು ಚಿಕಿತ್ಸೆಗಾಗಿ ಹೆಬ್ರಿ ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ಕರೆದೊಯ್ಯು ತ್ತಿರುವಾಗಲೇ ಮಾರ್ಗ ಮಧ್ಯ ಮೃತಪಟ್ಟ ಘಟನೆ ಶಿವಪುರ ಗ್ರಾಮದ ಯಡ್ಡೆ ಎಂಬಲ್ಲಿಂದ ವರದಿಯಾಗಿದೆ.
ಶಿವಪುರ ಗ್ರಾಮದ ಯಡ್ಡೆಯ ಶೇಖರ ಪೂಜಾರಿ ಎಂಬವರ ಮಗ ಹರೀಶ್ ಪೂಜಾರಿ (27) ಹುಟ್ಟಿನಿಂದಲೇ ಎಂಡೋಸಲ್ಫಾನ್ ಕಾಯಿಲೆ ಪೀಡಿತರಾಗಿದ್ದು ಸಂಪೂರ್ಣ ಅಂಗವಿಕಲರಾಗಿದ್ದರು. ಮನೆಯಲ್ಲಿ ಮಲಗಿಯೇ ಇರುತಿದ್ದ ಅವರು, ನಿನ್ನೆ ಸಂಜೆಯ ಭಾರೀ ಸಿಡಿಲಿಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು 108 ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಒಯ್ದರೂ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story