ಎಸ್ಡಿಟಿಯು ಮಂಗಳೂರು ಕ್ಷೇತ್ರ ಸಮಿತಿ ಪದಾಧಿಕಾರಿಗಳ ಆಯ್ಕೆ
ಹಾರಿಸ್ ಮಲಾರ್
ಮಂಗಳೂರು, ಅ. 22: ಸೋಷಿಯಲ್ ಡೆಮೊಕ್ರೆಟಿಕ್ ಟ್ರೇಡ್ ಯೂನಿಯನ್ ಮಂಗಳೂರು ಕ್ಷೇತ್ರ ಸಮಿತಿಗೆ ನೂತನ ಪದಾದಿಕಾರಿಗಳನ್ನು ದೇರಳಕಟ್ಟೆಯ ಕಚೇರಿಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಾರಿಸ್ ಮಲಾರ್, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ತಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಶಾಫಿ ಅಮೆಮಾರ್, ಜೊತೆ ಕಾರ್ಯದರ್ಶಿಯಾಗಿ ಮೊಹಿದ್ದೀನ್ ಅಜ್ಜಿನಡ್ಕ, ಕೋಶಾಧಿಕಾರಿಯಾಗಿ ಅಬೂಬಕ್ಕರ್, ಸದಸ್ಯರಾಗಿ ಮುಸ್ತಕ್ ವಳವೂರು, ಸಿದ್ದೀಕ್ ಅರ್ಕಾನ, ಸಮದ್ ಮಲಾರ್, ಅಬೂಸ್ವಾಲಿಹ್ ಪನೀರ್ ಅವರನ್ನು ಆಯ್ಕೆ ಮಾಡಲಾಯಿತು.
ಎಸ್ಡಿಟಿಯು ಜಿಲ್ಲಾ ಉಪಾಧ್ಯಕ್ಷ ಹಾಜಿ ಸುಲೈಮಾನ್ ಉಸ್ತಾದ್ ನೂತನ ಸಮಿತಿಯ ಘೋಷಣೆ ಮಾಡಿದರು, ಆಟೋ ಯೂನಿಯನ್ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಕಾರ್ಮಿಕ ಸಂಘಟನೆಯ ಅಗತ್ಯತೆ ಮತ್ತು ಉದ್ದೇಶದ ವಿವರಣೆ ನೀಡಿದರು.
ಎಸ್ಡಿಪಿಐ ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಲತಿಫ್ ಕೋಡಿಜಾಲ್ ಮತ್ತು ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು
Next Story