ತಿರುವಳ್ಳುವರ್ ಮತ್ತು ನನ್ನನ್ನು ಕೇಸರೀಕರಣಗೊಳಿಸುವ ಬಿಜೆಪಿಯ ಯತ್ನ ನಡೆಯದು: ರಜಿನಿಕಾಂತ್
ಚೆನ್ನೈ, ನ.8: ಬಿಜೆಪಿಯು ತನ್ನನ್ನು ಕೇಸರೀಕರಣಗೊಳಿಸಲು ಯತ್ನಿಸುತ್ತಿದ್ದು, ತಾನು ಅದರ ಬಲೆಗೆ ಬೀಳುವುದಿಲ್ಲ ಎಂದು ನಟ, ರಾಜಕಾರಣಿ ರಜಿನಿಕಾಂತ್ ಹೇಳಿದ್ದಾರೆ.
ಈ ಮೂಲಕ ರಜಿನಿಕಾಂತ್ ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎನ್ನುವ ಸುದ್ದಿಗಳಿಗೆ ತೆರೆ ಎಳೆದಂತಾಗಿದೆ.
ತಮಿಳುನಾಡಿನ ಕವಿ ತಿರುವಳ್ಳುವರ್ ಅವರಿಗೆ ಕೇಸರಿ ವಸ್ತ್ರ ತೊಡಿಸಿ ತಮಿಳುನಾಡು ಬಿಜೆಪಿ ವಿವಾದ ಸೃಷ್ಟಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ತಿರುವಳ್ಳುವರ್ ಅವರಂತೆ ನಾನೂ ಕೂಡ ಅವರ ಬಲೆಯಲ್ಲಿ ಸಿಲುಕುವುದಿಲ್ಲ" ಎಂದರು.
"ತನ್ನ ಜೊತೆ ಕೈಜೋಡಿಸಬೇಕೆಂದು ಬಿಜೆಪಿ ಎಂದೂ ನನ್ನಲ್ಲಿ ಕೇಳಿಲ್ಲ. ಆದರೆ ತಿರುವಳ್ಳುವರ್ ಅವರನ್ನು ಕೇಸರೀಕರಣಗೊಳಿಸಿದ ಯತ್ನದಂತೆ ನನ್ನನ್ನೂ ಕೇಸರೀಕರಣಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ನಾನೂ ಆ ಬಲೆಗೆ ಬೀಳುವುದಿಲ್ಲ, ತಿರುವಳ್ಳುವರ್ ಕೂಡ ಆ ಬಲೆಗೆ ಬೀಳುವುದಿಲ್ಲ" ಎಂದವರು ಹೇಳಿದರು.
Next Story