ದಾವಣಗೆರೆಯಲ್ಲಿ ಮೀಲಾದುನ್ನಬಿ ಸಂಭ್ರಮ
ದಾವಣಗೆರೆ, ನ.10: ನಗರದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ)ರ ಜನ್ಮ ದಿನಾರಚಣೆಯ ಪ್ರಯುಕ್ತ ಮೀಲಾದುನ್ನಬಿಯನ್ನು ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.
ಮಧ್ಯಾಹ್ನ 2.30ಕ್ಕೆ ಅಜಾದ್ ನಗರದ 7 ನೇ ಕ್ರಾಸ್ ಪಕ್ಕದ ಮೆಕ್ಕಾ ಮಸೀದಿ ಬಳಿ ಮೀಲಾದ್ ಕಮಿಟಿ ಕಚೇರಿ ಎದುರು ಈದ್ ಮಿಲಾದ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಮೆರವಣಿಗೆಗೆ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಚಾಲನೆ ನೀಡಿದರು.
ವಿಪ ಸದಸ್ಯ ಅಬ್ದುಲ್ ಜಬ್ಬಾರ್, ಕಮಿಟಿ ಅಧ್ಯಕ್ಷ ಕೆ. ಅತಾವುಲ್ಲಾ ರಜ್ವಿ, ತಂಜೀಮನ್ ಸಾದಿಕ್ ಪೈಲ್ವಾನ್, ಸೈಯದ್ ಸೈಫುಲ್ಲಾ, ಎ.ಬಿ. ಜೀಬಿವುಲ್ಲಾ, ಯಾಸೀರ್ ಪೀರ್ ರಝ್ವಿ, ಬಿ.ಅಸ್ಲಾಂ ಖಾನ್, ಎಸ್.ಎಂ. ಗೌಸ್, ಸೈಯದ್ ಶಫೀವುಲ್ಲಾ, ಸಿರಾಜ್ ಆಹಮದ್, ಎ.ಬಿ.ರಹೀಂ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸೈಯದ್ ಚಾರ್ಲಿ, ಅಮಾನುಲ್ಲಾ ಖಾನ್, ಮಹಮದ್ ಅಸ್ಲಾಂ, ಅಬ್ದುಲ್ ಬಾರಿ, ಕೋಳಿ ಇಬ್ರಾಹಿಂ, ಅಬ್ದುಲ್ ಲತೀಫ್, ಆಶ್ರಫ್ ಆಲಿ, ವಕೀಲ ನಜೀರ್, ಅಲ್ಲಾವುಲ್ಲಿ ಗಾಜಿಖಾನ್, ನೂರು ಆಹಮದ್, ಹಾಸಭಾವಿ ವೃತ್ತದಲ್ಲಿ ಹಿಂದೂಪರ ಸಂಘಟನೆಯ ಮುಖಂಡ ಕೆ.ಬಿ.ಶಂಕರನಾರಾಯಣ ಆಗಮಿಸಿ ಶುಭಹಾರೈಸಿದರು.
ಅಜಾದ್ ನಗರದ ಮದೀನ ಸರ್ಕಲ್ನಿಂದ ಪ್ರಾರಂಭಗೊಂಡ ಮೆರವಣಿಗೆಯು ಹಾಸಬಾವಿ ಸರ್ಕಲ್, ಚಾಮರಾಜ ಸರ್ಕಲ್, ಮಂಡಿಪೇಟೆ ರಸ್ತೆ ಮುಖಾಂತರ ಲಕ್ಷ್ಮೀ ಸರ್ಕಲ್, ತಾಲೂಕು ಕಚೇರಿ ಮುಂಭಾಗದ ರಸ್ತೆಯಿಂದ, ವಸಂತ ರಸ್ತೆ, ಹೊಂಡದ ರಸ್ತೆ, ರಾಣಿ ಚನ್ನಮ್ಮ ವೃತ್ತ, ಹಳೇ ಪಿ.ಬಿ ರಸ್ತೆ ಮುಖಾಂತರ, ಎಂ.ಜಿ. ಸರ್ಕಲ್, ಅಶೋಕ ರಸ್ತೆ, ಕೆ.ಆರ್ ರಸ್ತೆ ಮುಖಾಂತರ, ಜಗಳೂರು ಬಸ್ ನಿಲ್ದಾಣ, ಅರಳಿಮರ ಸರ್ಕಲ್, ಅಜಾದ್ ನಗರ ಪೊಲೀಸ್ ಠಾಣೆ ಮುಂಭಾಗ, ಬಿ.ಡಿ. ಲೇಔಟ್ ಮುಖ್ಯ ರಸ್ತೆ ಮುಖಾಂತರ ಸಾಗಿ ಸಂಜೆ ಜೋಹರ್ ನಗರದಲ್ಲಿರುವ ಈದ್ ಮಿಲಾದ್ ಮೈದಾನದಲ್ಲಿ ಮುಕ್ತಾಯಗೊಂಡಿತು.
ಮೆರವಣಿಗೆ ಸಾಗಿ ಬಂದ ದಾರಿಯುದ್ದಕ್ಕೂ ರಸ್ತೆಗಳ ಎರಡೂ ಬದಿಗಳಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾನಕ, ಮಜ್ಜಿಗೆ, ಎಳೆನೀರು ಸೇರಿದಂತೆ ಅನೇಕ ಬಗೆಯ ಪಾನೀಯಗಳನ್ನು ನೀಡಿದರು.
ಮೆರಣಿಗೆಯ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಿತ್ತು. ಡ್ರೋಣ್ ಕ್ಯಾಮೆರಾ ಹಾಗೂ ಬಂದೋಬಸ್ತ್ ಗಾಗಿ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಇಪ್ಪತ್ತಕ್ಕೂ ಅಧಿಕ ಸಿಸಿ ಕ್ಯಾಮರಾ ಅಳವಡಿಲಾಗಿತ್ತು.