ಇಸ್ಲಾಮಿಕ್ ವೇ ಟೀಂನಿಂದ ವಿಶಿಷ್ಟವಾಗಿ ಮೀಲಾದುನ್ನಬಿ ಆಚರಣೆ
ಮಂಗಳೂರು, ನ.13: ಮೀಲಾದುನ್ನಬಿ ಪ್ರಯುಕ್ತ ಇಸ್ಲಾಮಿಕ್ ವೇ ಟೀಂ ವತಿಯಿಂದ ಪ್ರವಾದಿ ಮುಹಮ್ಮದ್(ಸ.) ಪೈಗಂಬರರ ಬಗ್ಗೆಗಿನ ಗಣ್ಯರ ನುಡಿಗಳೊಂದಿಗೆ ಸಿಹಿತಿಂಡಿಯ ಪೊಟ್ಟಣವನ್ನು ಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು
ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ನಗರ ಕಮಿಷನರ್ ಕಚೇರಿ ಸೇರಿದಂತೆ ಗಣ್ಯರನ್ನು ಸಂದರ್ಶಿಸಿ ಮೀಲಾದ್ ಶುಭ ಕೋರಿದರು.
ಈ ಸಂಧರ್ಭದಲ್ಲಿ ಇಸ್ಲಾಮಿಕ್ ವೇ ಟೀಂ ಅಧ್ಯಕ್ಷ ಬಶೀರ್ ಅಹ್ಸನಿ, ಸದಸ್ಯರಾದ ನೌಫಲ್ ಮದನಿ ವಿಟ್ಲ, ಇಮ್ರಾನ್ ಕುತ್ತಾರ್, ಜುನೈದ್ ಮದನಿ ನಗರ, ಸಿದ್ದೀಕ್ ಬೋಳಿಯಾರ್, ಮುಹಮ್ಮದ್ ನಿಝಾರ್ ಮಲ್ಲರ್ ಪಟ್ನ, ನೌಮಾನ್ ಮಂಗಳೂರು, ಸಮೀರ್, ಇಕ್ಬಾಲ್ ಮಂಗಳಪೇಟೆ, ಹಾಗೂ ಹಿಶಾಂ ಬಜ್ಪೆ ಉಪಸ್ತಿತರಿದ್ದರು.