ಕ್ಷೌರದಂಗಡಿ ಮಾಲಕನ ಕೊಲೆ ಪ್ರಕರಣ: 9 ಆರೋಪಿಗಳು ವಶಕ್ಕೆ
ಬೆಂಗಳೂರು, ನ.13: ಕ್ಷೌರದಂಗಡಿ ಮಾಲಕ ಶ್ರೀನಿವಾಸ್ ಮೂರ್ತಿ ಕೊಲೆ ಪ್ರಕರಣದ ಸಂಬಂಧ 9 ಮಂದಿಯನ್ನು ಇಲ್ಲಿನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಚನ್ನಪಟ್ಟಣ ಮೂಲದ ಶ್ರೀನಿವಾಸ್ ಮೂರ್ತಿ, ಜಯನಗರದ 9ನೇ ಬ್ಲಾಕ್ನಲ್ಲಿ ನೆಲೆಸಿದ್ದು, ನ.11ರಂದು ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿದ್ದರು.
ಈ ಸಂಬಂಧ ಕಾರ್ಯಾಚರಣೆ ನಡೆಸಿರುವ ಪೊಲೀಸರು 9 ಮಂದಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
Next Story