ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿ: ಕರ್ನಾಟಕದ ಪ್ರಹಾರಕ್ಕೆ ಬಿಹಾರ ತತ್ತರ
ವಿಶಾಖಪಟ್ಟಣ, ನ.15: ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಬಿಹಾರ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಕರ್ನಾಟಕ ತಂಡ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯ‘ಎ’ ಗುಂಪಿನ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದೆ.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಿಹಾರ 19.3 ಓವರ್ಗಳಲ್ಲಿ 106 ರನ್ಗೆ ಆಲೌಟಾಯಿತು. ಶ್ರೇಯಸ್ ಗೋಪಾಲ್(2-16), ಪ್ರವೀಣ್ ದುಬೆ(2-18),ರಾಹುಲ್ ಮೋರೆ(2-22) ಹಾಗೂ ವಿ.ಕೌಶಿಕ್(2-24) ತಲಾ ಎರಡು ವಿಕೆಟ್ಗಳನ್ನು ಪಡೆದು ಬಿಹಾರದ ಮೇಲೆ ಪ್ರಹಾರ ನಡೆಸಿದರು. ಬಿಹಾರದ ಪರ ಬಬುಲ್ ಕುಮಾರ್(44, 34 ಎಸೆತ)ಅಗ್ರ ಸ್ಕೋರರ್ ಎನಿಸಿಕೊಂಡರು. ಗೆಲ್ಲಲು ಸುಲಭ ಸವಾಲು ಪಡೆದ ಕರ್ನಾಟಕ 11.2 ಓವರ್ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 107 ರನ್ ಗಳಿಸಿತು. ಕರುಣ್ ನಾಯರ್(ಔಟಾಗದೆ 65, 36 ಎಸೆತ, 7 ಬೌಂಡರಿ,4 ಸಿಕ್ಸರ್)ಹಾಗೂ ದೇವದತ್ತ ಪಡಿಕ್ಕಲ್(ಔಟಾಗದೆ 37,28 ಎಸೆತ)2ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 105 ರನ್ ಗಳಿಸಿ ತಂಡವನ್ನು ಆಧರಿಸಿದರು.
Next Story