ಕಲಾವಿದ, ಸಂಘಟಕ, ಚಿಂತಕ ಕಜೆ ಈಶ್ವರ ಭಟ್ ನಿಧನ
ಉಪ್ಪಿನಂಗಡಿ: ಉತ್ತಮ ಕಲಾವಿದನಾಗಿ, ಸಂಘಟಕನಾಗಿ, ಚಿಂತಕನಾಗಿ ಕೃಷಿ, ಶಿಕ್ಷಣ, ಸಹಕಾರ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದ ಕಜೆ ಈಶ್ವರ ಭಟ್ ಅವರು ಸೋಮವಾರ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಇಳಂತಿಲ ಗ್ರಾಮದ ನೇತ್ರಾವತಿ ನದಿ ತೀರದ 'ಕೇದಾರ'ದಲ್ಲಿ ವಾಸ್ತವ್ಯವಿದ್ದ ಇವರು ಕೆಲವು ದಿನಗಳ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರರಾದ ಡಾ. ಗೋವಿಂದ ಪ್ರಸಾದ ಕಜೆ, ಖ್ಯಾತ ನ್ಯಾಯವಾದಿ ಮಹೇಶ ಕಜೆ, ವೀಣಾ ಕಜೆ ಸೇರಿದಂತೆ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಸೋಮವಾರ ಬೆಳಗ್ಗೆ `ಕೇದಾರ' ನಿವಾಸದಲ್ಲಿ ಅಂತಿಮ ದರ್ಶನಕ್ಕಿಟ್ಟು ಬಳಿಕ ಅಂತಿಮ ಸಂಸ್ಕಾರ ನಡೆಸಲಾಯಿತು.
Next Story