ಕೆಸಿಎಫ್ ಒಮಾನ್ ನಿಜ್ವಾ ಝೋನ್ ವತಿಯಿಂದ ಮೀಲಾದ್ ಕಾನ್ಫರೆನ್ಸ್, ತಾಜುಲ್ ಉಲಮಾ ಅನುಸ್ಮರಣೆ
ಒಮಾನ್, ಡಿ.1: ಕೆಸಿಎಫ್ ಒಮಾನ್ ನಿಜ್ವಾ ಝೋನ್ ವತಿಯಿಂದ ಇತ್ತೀಚೆಗೆ ಫರ್ಕ್ ಮಜಿಲಿಸ್ ನಲ್ಲಿ 'ಹಬೀಬ್ ನಮ್ಮ ಜೊತೆಗಿರಲಿ' ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಫರೆನ್ಸ್, ಇಹ್ಸಾನ್ ಫೂಟ್ ಪ್ರಿಂಟ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ನಡೆಯಿತು.
ಕೆಸಿಎಫ್ ನಿಜ್ವಾ ಝೋನ್ ಅಧ್ಯಕ್ಷ ಕಲಂದರ್ ಬಾಷಾ ತೀರ್ಥಹಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ಸಯ್ಯದ್ ಮುಹಮ್ಮದ್ ಇಲ್ಯಾಸ್ ಅಹ್ಸನಿ ಅಲ್ ಜೀಲಾನಿಯವರ ದುವಾ ದೊಂದಿಗೆ ಚಾಲನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಇಬ್ರಾಹಿಂ ಸಖಾಫಿ ದಾವಣಗೆರೆ ನೆರವೇರಿಸಿದರು.
ಎಸ್ಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ ಹುಬ್ಬುರಸೂಲ್ (ಸ.ಅ) ಮತ್ತು ಇಹ್ಸಾನ್ ಕರ್ನಾಟಕ ಉತ್ತರ ಕರ್ನಾಟಕದಲ್ಲಿ ಇಸ್ಲಾಮಿಕ್ ದಅವಾ ಕ್ರಾಂತಿಯನ್ನು ನಡೆಸಿದ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಸಯ್ಯದ್ ಮುಹಮ್ಮದ್ ಇಲ್ಯಾಸ್ ಅಹ್ಸನಿ ಅಲ್ ಜೀಲಾನಿ, ಸುಫ್ಯಾನ್ ಸಖಾಫಿ, ಇಬ್ರಾಹಿಂ ಸಖಾಫಿ ದಾವಣಗೆರೆ, ಅಬ್ದುರ್ರಹ್ಮಾನ್ ಸಖಾಫಿ ಅವರನ್ನು ಝೋನ್ ವತಿಯಿಂದ ಸನ್ಮಾನಿಸಲಾಯಿತು.
ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಸಿಲುಕಿ ತಮ್ಮ ಆಸ್ತಿಯನ್ನು ಕಳೆದುಕೊಂಡ 2 ಮನೆಗಳಲ್ಲಿ ನಡೆಯಲಿರುವ ಮದುವೆಗಾಗಿ ಧನಸಹಾಯ ಮಾಡುವುದಾಗಿ ಕಾರ್ಯಕ್ರಮದಲ್ಲಿ ವಾಗ್ದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕೆಸಿಎಫ್ ಒಮಾನ್ ಅಧ್ಯಕ್ಷ ಜನಾಬ್ ಅಯ್ಯುಬ್ ಕೋಡಿ, ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷ ಸಯ್ಯಿದ್ ಆಬಿದ್ ತಂಗಳ್, ಸಂಘಟನಾ ಕಾರ್ಯದರ್ಶಿ ಶಂಸುದ್ದೀನ್ ಪಲ್ಲತಡ್ಕ, ಶಿಕ್ಷಣ ಕಾರ್ಯದರ್ಶಿ ಖಾಸಿಂ ಪೊಯ್ಯತಬೈಲ್, ಇಹ್ಸಾನ್ ಅಧ್ಯಕ್ಷರು ಇಬ್ರಾಹಿಂ ಹಾಜಿ ಆತ್ರಾಡಿ, ಇಹ್ಸಾನ್ ಕಾರ್ಯದರ್ಶಿ ಇರ್ಫಾನ್ ಪುತ್ತೂರ್, ಇಹ್ಸಾನ್ ಕರ್ನಾಟಕ ಕೆಸಿಎಫ್ ಒಮಾನ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಕಲಂದರ್ ಬಾವ ಮುಸ್ಲಿಯಾರ್ ಪರಪ್ಪು, ಕಾರ್ಯಕಾರಿ ಸಮಿತಿಯ ಸದಸ್ಯ ಹನೀಫ್ ಸಅದಿ, ಝುಬೈರ್ ಸಅದಿ, ಅಬ್ಬಾಸ್ ಮರಕ್ಕಡ, ಹಾರಿಸ್ ಕೊಳಕೇರಿ, ಖಾಸಿಂ ಹಾಜಿ ಅಳಕೆಮಜಲ್, ಮಸ್ಕತ್ ಝೋನ್ ನ ಮುಹಮ್ಮದ್ ಸಾಗರ್, ಅಬ್ದುಲ್ಲತೀಫ್ ತೋಡಾರ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ನಿಜ್ವಾ ಝೋನ್ ಕಾರ್ಯಕಾರಿ ಸಮಿತಿಯ ಸದಸ್ಯರು, ಫರ್ಕ್ ಸೆಕ್ಟರ್ ಹಾಗೂ ಅಲ್ ಹುದಾ ನಿಜ್ವಾ, ಐಸಿಎಫ್ ನಿಜ್ವಾ ಸೆಂಟರ್, ಆರ್.ಎಸ್.ಸಿ ನಿಜ್ವಾ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಲಂದರ್ ಬಾವ ವಂದಿಸಿ, ನಿರೂಪಿಸಿದರು.