ಅತ್ಯಾಚಾರದಲ್ಲಿ ಧರ್ಮ ಹುಡುಕುವುದು ಹೇಯಕೃತ್ಯ: ಜನವಾದಿ ಮಹಿಳಾ ಸಂಘಟನೆ
ಬೆಂಗಳೂರು, ಡಿ.2: ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಮರುಕಳಿಸದಂತೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಆಗ್ರಹಿಸಿದೆ.
ಈ ಕುರಿತು ಪ್ರಕಟನೆ ನೀಡಿರುವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ಈ ರೀತಿಯ ಪ್ರಕರಣಗಳಲ್ಲಿ ಕೀಳು ಮನೋಭಾವದ ಧರ್ಮದ ಬಣ್ಣ ಬಳಿದು ನಾಲ್ಕು ಜನ ಅತ್ಯಾಚಾರಿಗಳಲ್ಲಿ ಒಬ್ಬ ಮುಸ್ಲಿಂ ಯುವಕ ಮಾತ್ರ ಅತ್ಯಾಚಾರ ಮಾಡಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿರುವವರ ಮನಸ್ಥಿತಿಯು ಅತ್ಯಂತ ಹೇಯವಾಗಿದ್ದು, ಇನ್ನುಳಿದ ಮೂವರು ಹಿಂದೂಗಳು ಎಂಬ ಕಾರಣಕ್ಕೆ ಅವರು ಮಾಡಿದ ಅತ್ಯಾಚಾರ, ಕೊಲೆ ಮುಚ್ಚಿಡುವುದು ಎಂದರೆ ಕೊಲೆ ಮತ್ತು ಅತ್ಯಾಚಾರಕ್ಕೆ ಪ್ರೇರಕವಾದ ನಿಲುವಾಗಿದೆ. ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳೇಕು ಎಂದು ಅವರು ಆಗ್ರಹಿಸಿದ್ದಾರೆ.
Next Story