ನಾನು ಸಸ್ಯಾಹಾರಿ, ನನಗೇನೂ ಗೊತ್ತಿಲ್ಲ!
ಈರುಳ್ಳಿ ಬೆಲೆಯೇರಿಕೆ ಬಗ್ಗೆ ಕೇಂದ್ರ ಸಚಿವ ಚೌಬೆ
ಹೊಸದಿಲ್ಲಿ: ದೇಶಾದ್ಯಂತ ಈರುಳ್ಳಿ ಬೆಲೆಯೇರಿಕೆ ಜನರ ಕಣ್ಣಲ್ಲಿ ನೀರು ತರಿಸುತ್ತಿದ್ದರೆ, ಈ ಬಗ್ಗೆ ನಗುತ್ತಾ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅಶ್ವಿನಿ ಚೌಬೆ , ತಾನು ಸಸ್ಯಾಹಾರಿಯಾಗಿದ್ದು, ಯಾವತ್ತೂ ಈರುಳ್ಳಿ ತಿಂದಿಲ್ಲ. ಈರುಳ್ಳಿ ಬೆಲೆಯೇರಿಕೆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದಿದ್ದಾರೆ.
ಇದೇ ಸಂದರ್ಭ ಅವರು 'ನಾನು ಈರುಳ್ಳಿ ತಿನ್ನುವುದಿಲ್ಲ' ಎನ್ನುವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಬೆಂಬಲಿಸಿದರು.
"ನಾನು ಸಸ್ಯಾಹಾರಿ. ನಾನು ಈರುಳ್ಳಿಯನ್ನು ಎಂದಿಗೂ ತಿಂದಿಲ್ಲ. ಹಾಗಾಗಿ ಪರಿಸ್ಥಿತಿಯ ಬಗ್ಗೆ ನನಗೆ ಹೇಗೆ ತಿಳಿದಿರಲು ಸಾಧ್ಯ?" ಎಂದು ಚೌಬೆ ಪ್ರಶ್ನಿಸಿದ್ದಾರೆ.
Next Story