ರಿಯಾದ್: ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ವಿರೋಧಿಸಿ ಅಡ್ಡೂರ್ ಗಲ್ಫ್ ಕಮಿಟಿ ಪ್ರತಿಭಟನೆ
ರಿಯಾದ್: ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ ಮತ್ತು ಜಾರಿಗೊಳಿಸಲು ಉದ್ದೇಶಿಸಿರುವ ಎನ್ ಆರ್ ಸಿ ವಿರುದ್ಧ ಅಡ್ಡೂರ್ ಗಲ್ಫ್ ಕಮಿಟಿ ರಿಯಾದ್ ಪ್ರತಿಭಟನೆ ನಡೆಸಿತು. ರಿಯಾದ್ ಪ್ರಾಂತ್ಯದ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆ ನಡೆಸುತ್ತಿದ್ದ ಮಂಗಳೂರಿನ ನಾಗರಿಕರ ಮೇಲೆ ಲಾಠಿಚಾರ್ಜ್ ಹಾಗೂ ಗೋಲಿಬಾರ್ ನಡೆಸಿರುವುದನ್ನು ಖಂಡಿಸಿದ ಅಡ್ಡೂರ್ ಗಲ್ಫ್ ಕಮಿಟಿ, ತಪ್ಪಿತಸ್ಥ ಪೋಲೀಸರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಿಎಎ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿತು.
Next Story