ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಶ್ರಫ್ ಆಲಿಕುಂಞಿ
ಅಶ್ರಫ್ ಆಲಿಕುಂಞಿ
ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ 2020 ನೇ ಸಾಲಿನ ಅಧ್ಯಕ್ಷರಾಗಿ ಸುದ್ದಿ ಬಿಡುಗಡೆ ವರದಿಗಾರ ಅಶ್ರಫ್ ಆಲಿಕುಂಞಿ ಮುಂಡಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜ.17 ರಂದು ಬೆಳ್ತಂಗಡಿ ಪ್ರಸ್ಕ್ಲಬ್ನಲ್ಲಿ ಸಂಘದ ಅಧ್ಯಕ್ಷ ಆರ್. ಎನ್ ಪೂವಣಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ದೀಪಕ್ ಆಠವಳೆ (ಕನ್ನಡಪ್ರಭ- ಹೊಸದಿಗಂತ), ಕಾರ್ಯದರ್ಶಿಯಾಗಿ ಮನೋಹರ ಬಳಂಜ (ವಿಜಯವಾಣಿ), ಕೋಶಾಧಿಕಾರಿಯಾಗಿ ಚೈತ್ರೇಶ್ ಇಳಂತಿಲ (ಉದಯವಾಣಿ), ಜತೆ ಕಾರ್ಯದರ್ಶಿಯಾಗಿ ಗುರುಮೂರ್ತಿ ಶಗ್ರಿತ್ತಾಯ (ಉದಯವಾಣಿ ಕೊಕ್ಕಡ) ಇವರೂ ಅವಿರೋಧ ಆಯ್ಕೆಯಾದರು.
Next Story