ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪ್ರಕರಣ: ಚೆನ್ನೈಗೆ ತೆರಳಲು ಪೊಲೀಸ್ ತನಿಖಾ ತಂಡ ಸಿದ್ಧತೆ
ಮಂಗಳೂರು : ಬಜ್ಪೆಯ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಶಂಕಿತ ಉಗ್ರ ಆದಿತ್ಯ ರಾವ್ಗೆ ಈಗಾಗಲೇ ನ್ಯಾಯಾಲಯವು 10 ದಿನಗಳವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸರ ತಂಡವು ಚೆನ್ನೈಗೆ ತೆರಳಲು ಸಿದ್ಧತೆ ಮಾಡಿಕೊಂಡಿದೆ.
ಶಂಕಿತ ಉಗ್ರನು ಸ್ಫೋಟಕಗಳನ್ನು ತಯಾರಿಸಲು ಅಗತ್ಯ ಇದ್ದ ರಾಸಾಯನಿಕ ಸಹಿತ ಮತ್ತಿತರ ವಸ್ತುಗಳನ್ನು ಚೆನ್ನೈನಿಂದ ಆರ್ಡರ್ ಮಾಡಿಕೊಂಡು ತರಿಸುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಮಾಹಿತಿ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇನ್ನು 10 ದಿನದೊಳಗೆ ಆತನನ್ನು ಚೆನ್ನೈಗೆ ಕರೆದೊಯ್ದು ವಿಚಾರಣೆ ನಡೆಸುವ ಅನಿವಾರ್ಯತೆ ಪೊಲೀಸರ ಮುಂದಿದೆ ಎಂದು ತಿಳಿದುಬಂದಿದೆ.
Next Story