ಫೆ.2: ಗುರುಪುರ ಬಂಟರ ಸಂಗದಿಂದ ಬಂಟ ಕಲಾ ವೀಳ್ಯ -2020
ಮಂಗಳೂರು, ಜ. 28: ಗುರುಪುರ ಬಂಟರ ಮಾತೃ ಸಂಘದ ವತಿಯಿಂದ ವಾಮಂಜೂರು ಅಮೃತೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ಫೆಬ್ರವರಿ 2ರಂದು ಬಂಟ ಕಲಾ ವೀಳ್ಯ -2020 ಎಂಬ ಅಂತರ್ ಬಂಟರ ಸಂಘಗಳ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ರಾಷ್ಟ್ರೀಯ ಬಂಟರ ಬಾವೈಕ್ಯ ಸಂಗಮ ಸಮಿತಿಯ ಪ್ರಧಾನ ಸಂಚಾಲಕ ಸುದರ್ಶನ ಶೆಟ್ಟಿ ಪೆರ್ಮಂಕಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಂಡು ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ಒಂದು ಲಕ್ಷ ರೂ., ದ್ವಿತೀಯ 60 ಸಾವಿರ, ತೃತೀಯ 40 ಸಾವಿರ ಮತ್ತು ನಾಲ್ಕನೆ ಸ್ಥಾನ ಪಡೆದ ತಂಡಕ್ಕೆ 20 ಸಾವಿರ ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೆ ತಲಾ 10 ಸಾವಿರ ಫ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ಸುದರ್ಶನ ಶೆಟ್ಟಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಈಗಾಗಲೆ ನೊಂದಾಯಿಸಿ ಭಾಗವಹಿಸಲು ಸೂಚನೆ ನೀಡಿರುವ ತಂಡಗಳು ಜೆಪ್ಪು, ಕಾರ್ಕಳ, ಕುಕ್ಕಂದೂರು, ಬೆಂಗಳೂರು, ತುಳುನಾಡು ಬಂಟ್ಸ್ ಮಂಗಳೂರು, ಬೆಳ್ತಂಗಡಿ, ಕಲ್ಲಡ್ಕ, ಜೆಪ್ಪಿನಮೊಗರು ಬಂಟರ ಸಂಘಗಳು ಭಾಗವಹಿಸಲಿವೆ ಎಂದು ಸುದರ್ಶನ ಶಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಸಂಘದ ಆಧ್ಯಕ್ಷ ರಾಜ್ ಕುಮಾರ್ ಶೆಟ್ಟಿ,ಸತೀಶ್ ಶೆಟ್ಟಿ,ಸುದರ್ಶನ ಶೆಟ್ಟಿ ಫೆರ್ಮಂಕಿ,ಚಂದ್ರ ಹಾಸ ಶೆಟ್ಟಿ, ದೇವಿಕಿರಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.