ದೇಶ 'ಜನ್ ಕಿ ಬಾತ್'ನಿಂದ ನಡೆಯಬೇಕೆ ಹೊರತು, 'ಮನ್ ಕಿ ಬಾತ್'ನಿಂದಲ್ಲ: ದಿಲ್ಲಿ ಫಲಿತಾಂಶದ ಬಗ್ಗೆ ಉದ್ಧವ್ ಠಾಕ್ರೆ
ಮುಂಬೈ: ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ದೇಶವು ಜನ್ ಕಿ ಬಾತ್ ನಿಂದ ನಡೆಯಬೇಕೆ ಹೊರತು, ಮನ್ ಕಿ ಬಾತ್ ನಿಂದಲ್ಲ ಎನ್ನುವುದನ್ನು ದಿಲ್ಲಿಯ ಜನತೆ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.
"ದಿಲ್ಲಿ ಚುನಾವಣೆಯಲ್ಲಿ ಜಯ ಗಳಿಸಿದ ಆಮ್ ಆದ್ಮಿ ಪಕ್ಷವನ್ನು ಮತ್ತು ಅರವಿಂದ್ ಕೇಜ್ರಿವಾಲ್ ರನ್ನು ಮತ್ತು ದಿಲ್ಲಿಯ ಜನರನ್ನು ನಾನು ಅಭಿನಂದಿಸುತ್ತೇನೆ. ದೇಶವು ಜನ್ ಕಿ ಬಾತ್ ನಿಂದ ನಡೆಯುತ್ತದೆಯೇ ಹೊರತು ಮನ್ ಕಿ ಬಾತ್ ನಿಂದಲ್ಲ ಎಂದು ಜನರು ತೋರಿಸಿಕೊಟ್ಟಿದ್ದಾರೆ" ಎಂದವರು ಹೇಳಿದ್ದಾರೆ.
Next Story