ನ್ಯಾಯವಾದಿ ಎ.ಎಲ್.ಶೆಣೈ
ಮಂಗಳೂರು, ಫೆ.15: ನಗರದ ಹಿರಿಯ ನ್ಯಾಯವಾದಿ ಎ.ಎಲ್. ಶೆಣೈ (88)ಶನಿವಾರ ನಿಧನರಾದರು. ಮೃತರು ಪತ್ನಿ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರದ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಉದ್ಯೋಗದಲ್ಲಿದ್ದುಕೊಂಡು ಕಾನೂನು ಪದವಿ ಪಡೆದರು. ಖ್ಯಾತ ವಕೀಲ ಮಾಧವ ರಾವ್ ಅವರ ಜ್ಯೂನಿಯರ್ ಆಗಿ ವಕೀಲ ವೃತ್ತಿ ಆರಂಭಿಸಿದ ಶೆಣೈ, ತುರ್ತು ಪರಿಸ್ಥಿತಿಯ ಸಂದರ್ಭ ಜೈಲು ವಾಸ ಅನುಭವಿಸಿದ್ದರು.
ಭಾರತೀಯ ಮಜ್ದೂರ್ ಸಂಘ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇಳಿ ವಯಸ್ಸಿನಲ್ಲೂ ವಕೀಲರಾಗಿ ಸೇವೆ ಸಲ್ಲಿಸಿದ್ದರು.
ಹಿರಿಯ ನ್ಯಾಯವಾದಿ ಎ.ಎಲ್. ಶೆಣೈ ಅವರ ನಿಧನಕ್ಕೆ ಮಂಗಳೂರು ವಕೀಲರ ಸಂಘ ಸಂತಾಪ ಸಲ್ಲಿಸಿದೆ.
Next Story