ಕೇವಲ 45 ನಿಮಿಷಗಳಲ್ಲಿ ಈಜಿ ಪೆರಿಯಾರ್ ನದಿ ದಾಟಿದ 11 ವರ್ಷದ ಅಂಧ ಬಾಲಕ
ಕೊಚ್ಚಿ: ಇಲ್ಲಿನ 'ಸ್ಕೂಲ್ ಫಾರ್ ದಿ ಬ್ಲೈಂಡ್' ವಿದ್ಯಾರ್ಥಿ 11 ವರ್ಷದ ಅಂಧ ಬಾಲಕ ಆರ್. ಮನೋಜ್ ಅದ್ವೈತ ಆಶ್ರಮದಿಂದ ಅಲುವ ಮಣಪ್ಪುರದವರೆಗೆ ಪೆರಿಯಾರ್ ನದಿಯಲ್ಲಿ ಕೇವಲ 45 ನಿಮಿಷಗಳಲ್ಲಿ ಈಜಿ ಸಾಹಸ ಮೆರೆದಿದ್ದಾನೆ.
ಅದ್ವೈತ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ಸ್ವರೂಪಾನಂದ ಸ್ವಾಮಿಕಲ್ ಮನೋಜ್ ನ ಈ ಸಾಧನಾ ಯಾತ್ರೆಗೆ ಚಾಲನೆ ನೀಡಿದರು. ಮನೋಜ್ ನ ಶಾಲಾ ಶಿಕ್ಷಕರು, ಸ್ನೇಹಿತರೆಲ್ಲಾ ಅಲ್ಲಿ ಸೇರಿ ಆತನನ್ನು ಹುರಿದುಂಬಿಸುತ್ತಿದ್ದರು. ಶಾಲಾ ಬ್ಯಾಂಡ್ ತಂಡ ಕೂಡ ತನ್ನ ವಾದ್ಯವನ್ನು ನುಡಿಸಿ ಆತನ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಮಣಪ್ಪುರಂಗೆ ಆತ 8:45ರ ಸುಮಾರಿಗೆ ಎಲ್ಲರ ಕರತಾಡನದ ನಡುವೆ ತಲುಪಿದ್ದ.
ಮನೋಜ್ ನ ಕೋಚ್ ಸಜಿ ವಾಲಸ್ಸೆರಿಲ್ ತಮ್ಮ ಶಿಷ್ಯನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾರೆ. ಕಳೆದ 11 ವರ್ಷಗಳಿಂದ ಅವರು ಉಚಿತವಾಗಿ ಈಜು ತರಬೇತಿ ನೀಡುತ್ತಿದ್ದಾರೆ.
ತನ್ನ ಶಾಲೆಯ ಹಿರಿಯ ವಿದ್ಯಾರ್ಥಿ ನವನೀತ್ ಈ ಹಿಂದೆ ಪೆರಿಯಾರ್ ನದಿಯಲ್ಲಿ ಈಜಿದ್ದೇ ತನಗೆ ಸ್ಫೂರ್ತಿ ಎಂದು ಮನೋಜ್ ಹೇಳುತ್ತಾನೆ.
Next Story