ಬೈಕಿಗೆ ಬಸ್ ಢಿಕ್ಕಿ: ಓರ್ವ ಮೃತ್ಯು, ಇನ್ನೋರ್ವ ಗಂಭೀರ
ಮುಂಡಗೋಡ, ಫೆ.27: ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಹುಬ್ಬಳ್ಳಿ- ಶಿರಸಿ ರಸ್ತೆಯ ಕರಗಿನಕೊಪ್ಪ ಗ್ರಾಮದ ಸನಿಹ ಬುಧವಾರ ರಾತ್ರಿ ನಡೆದಿದೆ
ಜೋಗೇಶ್ವರ ಹಳ್ಳ ಗೌಳಿ ದಡ್ಡಿಯ ವಿಠ್ಠಲ ಕೊಕರೆ(34) ಮೃತಪಟ್ಟವರಾಗಿದ್ದಾರೆ. ಸಹಸವಾರ ದೂಳು ಅಡವಳಕರ (25) ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ರಾತ್ರಿ ಹುಬ್ಬಳ್ಳಿ ಗೆ ಹೊರಟಿದ್ದ ಬಸ್ ಹಾಗೂ ಶಿರಸಿಯತ್ತ ಹೊರಟಿದ್ದ ಬೈಕ್ ನಡುವೆ ಕರಗಿನಕೊಪ್ಪಗ್ರಾಮದ ಹುಬ್ಬಳ್ಳಿ ಶಿರಸಿ ರಸ್ತೆಯ ತಿರುವಿನಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ವಿಠ್ಠಲ ಕೊಕರೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸಹ ಸವಾರ ದೂಳು ಅಡವಳಕರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story