ಭ್ರಷ್ಟಾಚಾರ: ಜಿಎಸ್ಟಿ ಉಪ ಆಯುಕ್ತ ದೀಪಕ್ ಪಂಡಿತ್ ವಿರುದ್ಧ ಸಿಬಿಐಯಿಂದ ಪ್ರಕರಣ ದಾಖಲು
ಹೊಸದಿಲ್ಲಿ, ಫೆ. 28: ಆದಾಯಕ್ಕಿಂತ ಶೇ. 376 ಪಾಲು 3.96 ಕೋಟಿ ರೂಪಾಯಿ ಆಸ್ತಿ ಹೊಂದಿದ್ದ ಆರೋಪದಲ್ಲಿ ಜಿಎಸ್ಟಿ ಹಾಗೂ ಕೇಂದ್ರ ಸುಂಕ ಇಲಾಖೆಯ ಉಪ ಆಯುಕ್ತ ದೀಪಕ್ ಪಂಡಿತ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಚಿತ್ರ ನಿರ್ದೇಶಕ ಅಶೋಕ್ ಪಂಡಿತ್ ಅವರ ಸಂಬಂಧಿಕರಾಗಿರುವ ದೀಪಕ್ ಪಂಡಿತ್ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಹಾಗೂ ಭ್ರಷ್ಟಾಚಾರದ ಮೂಲಕ ಬೃಹತ್ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ ಎಂದು ಸಿಬಿಐ ಎಫ್ಐಆರ್ನಲ್ಲಿ ಆರೋಪಿಸಿದೆ.
ದೀಪಕ್ ಪಂಡಿತ್ ನನ್ನ ಕಿರಿಯ ಸಹೋದರನಂತೆ ಎಂದು ಅಶೋಕ್ ಪಂಡಿತ್ 2018ರಲ್ಲಿ ಟ್ವೀಟ್ ಮಾಡಿದ್ದರು. ಸಿಬಿಐ ದೀಪಕ್ ಪಂಡಿತ್, ಅವರ ಪತ್ನಿ ಆರುಷಿ ಹಾಗೂ ಇಬ್ಬರು ಪುತ್ರರಾದ ಅಶುತೋಷ್, ದಿವ್ಯಾಂಶು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೀಪಕ್ ಪಂಡಿತ್ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಮುಂಬೈಯ 6 ಹಾಗೂ ಭುವನೇಶ್ವರದ 1 ಸೇರಿದಂತೆ ಒಟ್ಟು 7 ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
Next Story