ಕುಂದಾಪುರ, ಮಾ.22: ಹಿರಿಯ ಸಾಮಾಜಿಕ ಧುರೀಣ, ನಿವೃತ್ತ ಅಧ್ಯಾಪಕ ಕೆ.ಬಿ.ರಾಮಣ್ಣ ಶೆಟ್ಟಿ(84) ಮಾ.21ರಂದು ರಾತ್ರಿ ಜಪ್ತಿಯ ಸ್ವಗೃಹದಲ್ಲಿ ನಿಧನರಾದರು.
ಇವರು ಪತ್ನಿ, ಕುಂದಾಪುರದ ವೈದ್ಯ ಡಾ.ಉತ್ತಮ ಕುಮಾರ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಸಹಿತ ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.