ಗೊಂದಲ ಬೇಡ, ಎಲ್ಲಾ ಅಗತ್ಯ ಸೇವೆಗಳು ಲಭ್ಯ: ಮಂಗಳೂರು ಕಮಿಷನರ್ ಹರ್ಷ
21 ದಿನಗಳ ಲಾಕ್ ಡೌನ್
ಮಂಗಳೂರು: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಪ್ರಧಾನಿ ಮೋದಿಯವರು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದಾರೆ. ಲಾಕ್ ಡೌನ್ ಘೋಷಣೆಯ ನಂತರ ಜನರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಮಂಗಳೂರು ಕಮಿಷನರ್ ಹರ್ಷ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ.
“ಅಗತ್ಯ ಸೇವೆಗಳು , ದಿನಸಿ ಅಂಗಡಿಗಳು ಮತ್ತು ಇತರ ಪ್ರತಿದಿನದ ಅವಶ್ಯಕತೆಗಳ ಬಗ್ಗೆ ಗೊಂದಲವಿದೆ. ಈ ಎಲ್ಲಾ ಅಂಗಡಿಗಳು ತೆರೆದಿರಲಿವೆ. ಈ ಬಗ್ಗೆ ಹೆದರಬೇಕಾದ ಅಗತ್ಯವಿಲ್ಲ. ಅಗತ್ಯ ಸೇವೆಗಳಿಗೆ ಯಾವುದೇ ತೊಡಕಾಗದು. ದಕ ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಈ ಸೇವೆಗಳು ಲಭಿಸಲಿವೆ” ಎಂದವರು ಟ್ವೀಟ್ ಮಾಡಿದ್ದಾರೆ.
There seems to be some confusion regarding essential services and grocery shops and other such daily requirements.. all such shops will remain open .. NO Need to panic..essential supplies and services will be unaffected..right now in DK district from 6am till 12noon.
— Harsha IPS CP Mangaluru City (@compolmlr) March 24, 2020