ಮಸೀದಿಗಳಲ್ಲಿ ಪ್ರತೀ ದಿನ 4 ಬಾರಿ ಸಂದೇಶ ಬಿತ್ತರಿಸಲು ದ.ಕ.ಜಿಲ್ಲಾಧಿಕಾರಿ ಸೂಚನೆ
ಕೊರೋನ ಕುರಿತ ವಿಶೇಷ ಜಾಗೃತಿ
ಮಂಗಳೂರು, ಮಾ. 31: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಮತ್ತು ಅಮೀರ್ ಎ ಷರಿಯತ್ನ ನಿರ್ದೇಶನದಂತೆ ಐದು ಭಾಷೆಗಳಲ್ಲಿ ರಚಿಸಲಾದ ಆಡಿಯೋ ಸಂದೇಶವನ್ನು ರಾಜ್ಯ ವಕ್ಫ್ ಮಂಡಳಿಯು ಬಿಡುಗಡೆ ಮಾಡಿದೆ.
ಈ ಆಡಿಯೋವನ್ನು ಎಲ್ಲಾ ಮಸೀದಿಗಳ ಧ್ವನಿವರ್ಧಕಗಳಲ್ಲಿ ದಿನಕ್ಕೆ ನಾಲ್ಕು ಬಾರಿ ಪ್ರಕಟಿಸಲು ಮಸೀದಿಗಳ ಆಡಳಿತ ಸಮಿತಿಗೆ ವಕ್ಫ್ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದ್ದಾರೆ.
ಅದರಂತೆ ಪ್ರತೀ ದಿನ ಬೆಳಗ್ಗೆ 10ಕ್ಕೆ, ಸಂಜೆ 4ಕ್ಕೆ, ಮುಸ್ಸಂಜೆ 6ಕ್ಕೆ, ರಾತ್ರಿ 8 ಗಂಟೆಗೆ ಈ ಆಡಿಯೋ ಕ್ಲಿಪ್ಪನ್ನು ಧ್ವನಿವರ್ಧಕಗಳಲ್ಲಿ ಪ್ರಸಾರ ಮಾಡಲು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮನವಿ ಮಾಡಿದ್ದಾರೆ.
Next Story