ಕುಡುಪು, ಎ.2: ಕೊಣಾಜೆ ಸಮೀಪದ ಅಸೈಗೋಳಿಯ ಕರ್ನಾಟಕ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಕುಡುಪು ನಡುಮನೆ ನಿವಾಸಿ ಶ್ರೀಧರ್(59) ಮಂಗಳವಾರ ರಕ್ತದೊತ್ತಡ ಸಮಸ್ಯೆಯಿಂದ ನಿಧನರಾದರು.
ಮೈಸೂರು, ಮಂಗಳೂರಿನಲ್ಲಿ ಮೀಸಲು ಪೊಲೀಸ್ ಸೇವೆಯಲ್ಲಿದ್ದ ಇವರು ತಾಯಿ, ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.