ಕಣ್ಣೂರು: ಸೆಂಟ್ರಲ್ ಜೈಲಿನ ಕೊರೋನ ನಿಗಾ ಕೇಂದ್ರದಿಂದ ಕೈದಿ ಪರಾರಿ
ಸಾಂದರ್ಭಿಕ ಚಿತ್ರ
ಕಾಸರಗೋಡು, ಎ.3: ಕಣ್ಣೂರು ಸೆಂಟ್ರಲ್ ಜೈಲಿನ ಕೊರೋನ ನಿಗಾ ಕೇಂದ್ರದಿಂದ ಕೈದಿಯೋರ್ವ ಪರಾರಿಯಾದ ಘಟನೆ ನಡೆದಿದೆ.
ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಅಜಯ್ ಬಾಬು ಪರಾರಿಯಾದ ಆರೋಪಿ.
ಅಜಯ್ ಕಾಸರಗೋಡಿನ ಕೆನರಾ ಬ್ಯಾಂಕ್ ನ ಕಳವು ಪ್ರಕರಣದ ಆರೋಪಿಯಾಗಿದ್ದಾನೆ. ಮಾರ್ಚ್ 25ರಂದು ಕಾಸರಗೋಡಿನಿಂದ ಅಜಯ್ ಬಾಬು ನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು .
ಕೊರೋನ ವೈರಸ್ ಸೋಂಕಿತ ವಲಯವಾಗಿರುವ ಕಾಸರಗೋಡಿನಿಂದ ಕರೆತರಲಾದ ಕೈದಿಯನ್ನು ಜೈಲಿನ ನಿಗಾ ವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಇಂದು ಕೇಂದ್ರದ ವೆಂಟಿಲೇಷನ್ ಮುರಿದು ಅಜಯ್ ಬಾಬು ಪರಾರಿಯಾಗಿದ್ದಾನೆ.
ಪೊಲೀಸರು ಈತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
Next Story