ರವಿವಾರ ರಾತ್ರಿ 9 ಗಂಟೆಗೆ ಕೊರೋನವೈರಸ್ ಸಾಯುವುದಿಲ್ಲ, ವದಂತಿಗಳನ್ನು ನಂಬಬೇಡಿ: ಪಿಐಬಿ
ಹೊಸದಿಲ್ಲಿ: ಎಪ್ರಿಲ್ 5ರಂದು ರವಿವಾರ ರಾತ್ರಿ 9 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಿ ಜನರು ಮೊಂಬತ್ತಿ ಹಾಗೂ ಹಣತೆ ಬೆಳಗಿಸಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ದೇಶ ಒಂದಾಗಿದೆ ಎಂದು ಸಾರಿ ಹೇಳಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹರಡುತ್ತಿರುವ ವದಂತಿಗಳನ್ನು ನಂಬಬಾರದು ಎಂದು ಕೇಂದ್ರ ಸರಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋದ ಸತ್ಯಶೋಧನಾ ಘಟಕ ಹೇಳಿದೆ.
ದೇಶ ಕೊರೋನ ವಿರುದ್ಧ ಹೋರಾಟಕ್ಕೆ ಕಟಿಬದ್ಧವಾಗಿದೆ ಎಂಬ ಸಂದೇಶ ಸಾರುವ ಉದ್ದೇಶ ಮಾತ್ರ ಈ ಕಾರ್ಯಕ್ರಮದ ಹಿಂದಿದೆ ಎಂದು ಪಿಐಬಿ ಹೇಳಿದೆ ಹಾಗೂ ಜನರು ಎಂದಿನಂತೆ ಸಾಮಾಜಿಕ ಅಂತರ ಕಾಪಾಡಬೇಕೆಂದು ತಿಳಿಸಿದೆ.
'ಕೊರೋನವೈರಸ್ ರವಿವಾರ ರಾತ್ರಿ 9 ಗಂಟೆಗೆ ಸಾಯುತ್ತದೆ', '130 ಮೋಂಬತ್ತಿಗಳನ್ನು ಜತೆಯಾಗಿ ಬೆಳಗಿಸಿದರೆ ತಾಪಮಾನ 9 ಡಿಗ್ರಿಗಳಷ್ಟು ಹೆಚ್ಚಾಗುತ್ತದೆ ಎಂದು ಐಐಟಿ ಪ್ರೊಫೆಸರ್ ಒಬ್ಬರು ಹೇಳಿದ್ದಾರೆ' ಎಂಬಿತ್ಯಾದಿ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಂತಹ ವದಂತಿಗಳು ಸುಳ್ಳು ಅವುಗಳಿಗೆ ಕಿವಿಗೊಡಬೇಡಬಾರದು ಎಂದು ಸಾರ್ವಜನಿಕರಿಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ ಕಿವಿಮಾತು ಹೇಳಿದೆ.
The initiative of lighting candles/diyas/torch on 5th April at 9pm by PM @narendramodi is just for showing solidarity and confidence in our collective fight against COVID-19. Don't believe in rumours! #MyGovFactCheck #IndiaFightsCorona https://t.co/QwyGbcSGTj pic.twitter.com/VAJO27E4xj
— MyGovIndia (@mygovindia) April 4, 2020