ನಿವೃತ್ತ ವಿಭಾಗೀಯ ಅರಣ್ಯ ಅಧಿಕಾರಿ ಕೃಷ್ಣ ರೈ ನಿಧನ
ಕೊಣಾಜೆ: ನಿವೃತ್ತ ವಿಭಾಗೀಯ ಅರಣ್ಯ ಅಧಿಕಾರಿ ಬಿಳಿಯೂರುಗುತ್ತು ಬಿ. ಕೃಷ್ಣ ರೈ ನಗರದ ಸ್ವಗೃಹದಲ್ಲಿ ರವಿವಾರ ನಿಧನರಾದರು.
ಅವರು 35ವರ್ಷ ಭಾರತೀಯ ಅರಣ್ಯ ಸೇವೆಯಲ್ಲಿ ಸೇವೆ ಸಲ್ಲಿಸಿದರು. ತಮಿಳುನಾಡು ಮತ್ತು ಕರ್ನಾಟಕ ಎರಡರಲ್ಲೂ ತಮ್ಮ ಸೇವೆಗಳನ್ನು ನೀಡಿದ್ದ ಅವರು ನಿವೃತ್ತಿಯ ನಂತರ ಪ್ರಗತಿಪರ ಕೃಷಿಕರಾಗಿದ್ದರು.
ಮೃತರು ಪತ್ನಿ , ಪುತ್ರ ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story