ಕೋವಿಡ್ 19: ಕರ್ತವ್ಯಕ್ಕೆ ಹಾಜರಾಗಲು ಕಣ್ಣನ್ ಗೋಪಿನಾಥನ್ ಗೆ ಸರಕಾರದ ಸೂಚನೆ
ಮಾಜಿ ಐಎಎಸ್ ಅಧಿಕಾರಿ ಪ್ರತಿಕ್ರಿಯಿಸಿದ್ದು ಹೀಗೆ...
ಹೊಸದಿಲ್ಲಿ: ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತ ಸೇರ್ಪಡೆಯಾಗಬೇಕು ಎನ್ನುವ ಸರಕಾರದ ಆದೇಶವನ್ನು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ತಿರಸ್ಕರಿಸಿದ್ದಾರೆ. ತಾನು ಸಾಮಾನ್ಯ ನಾಗರಿಕನಾಗಿ ಕೊರೋನ ಹೋರಾಟದಲ್ಲಿ ಕೈಜೋಡಿಸುತ್ತೇನೆ ಹೊರತು ಐಎಎಸ್ ಅಧಿಕಾರಿಯಾಗಿ ಅಲ್ಲ ಎಂದವರು ಹೇಳಿದ್ದಾರೆ.
ಕಣ್ಣನ್ ಗೋಪಿನಾಥನ್ ಅವರ ರಾಜೀನಾಮೆಯನ್ನು ಇದುವರೆಗೂ ಸ್ವೀಕರಿಸದ ಕಾರಣ ಸರಕಾರ ಕರ್ತವ್ಯಕ್ಕೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಿದೆ. ಇದು ಸರಕಾರದ ಕಿರುಕುಳ ಕೃತ್ಯ ಎಂದು ಗೋಪಿನಾಥನ್ ಹೇಳಿದ್ದಾರೆ.
ಸರಕಾರದ ಆದೇಶದ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, "ನಾನು ರಾಜೀನಾಮೆ ಸಲ್ಲಿಸಿ 8 ತಿಂಗಳುಗಳು ಕಳೆದಿವೆ. ಸರಕಾರಕ್ಕೆ ತಿಳಿದಿರುವ ಒಂದೇ ವಿಚಾರವೆಂದರೆ ಅದು ಕಿರುಕುಳ. ಮುಂದೆಯೂ ಅವರು ಕಿರುಕುಳ ನಡೆಸುತ್ತಾರೆ ಎನ್ನುವುದು ನನಗೆ ತಿಳಿದಿದೆ. ಆದರೆ ಈ ಸಂಕಷ್ಟದಲ್ಲಿ ಸಮಯದಲ್ಲಿ ನಾನು ಸ್ವಯಂಪ್ರೇರಿತನಾಗಿ ಸಹಾಯ ಮಾಡಲು ಇಚ್ಛಿಸುತ್ತೇನೆ. ಆದರೆ ಐಎಎಸ್ ಅಧಿಕಾರಿಯಾಗಿ ಅಲ್ಲ" ಎಂದವರು ಹೇಳಿದ್ದಾರೆ.
Received a letter from the govt, asking me to re-join duties as IAS. While I extend all my services, in health, wealth and mind to the govt in this fight against covid-19 pandemic, it will be as a free & responsible citizen and not anymore as an IAS officer. 1/n pic.twitter.com/qlW0pBq1Ue
— Kannan Gopinathan (@naukarshah) April 9, 2020
My reply to the Govt.
— Kannan Gopinathan (@naukarshah) April 9, 2020
It has been almost 8 months now since my resignation. Only thing the Govt knows is harassment. Of people & of officers. I know that they want to harass me further. But still, I offer to volunteer for the govt in these difficult times. But not rejoining IAS. pic.twitter.com/8yMT5s06gP