ಪುತ್ತೂರು, ಎ.13: ನಗರದ ಬಪ್ಪಳಿಗೆ ನಿವಾಸಿ ತರಕಾರಿ ವ್ಯಾಪಾರಿ ಬಿ.ಎಚ್.ಸುಲೈಮಾನ್(72) ಹೃದಯಾಘಾತದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಸುಲೈಮಾನ್ ಪುತ್ತೂರು ನಗರದ ಏಳ್ಮುಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ತರಕಾರಿ ಅಂಗಡಿಯನ್ನು ನಡೆಸಿಕೊಂಡು ಬಂದಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.