ಖತರ್, ಬಹರೈನ್ಗೆ ನೂತನ ಭಾರತೀಯ ರಾಯಭಾರಿಗಳ ನೇಮಕ
Deepak Mittal
ಹೊಸದಿಲ್ಲಿ, ಎ.30: ದೀಪಕ್ ಮಿತ್ತಲ್ ಮತ್ತು ಪಿಯೂಷ ಶ್ರೀವಾಸ್ತವ ಅವರನ್ನು ಅನುಕ್ರಮವಾಗಿ ಖತರ್ ಮತ್ತು ಬಹರೈನ್ ಗೆ ಮುಂದಿನ ಭಾರತೀಯ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮಿತ್ತಲ್ ಮತ್ತು ಶ್ರೀವಾಸ್ತವ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಗಳಾಗಿದ್ದು, ಭಾರತೀಯ ವಿದೇಶ ಸೇವೆ (ಐಎಫ್ಎಸ್)ಯ 1998ರ ತಂಡದ ಅಧಿಕಾರಿಗಳಾಗಿದ್ದಾರೆ. ಅವರಿಬ್ಬರೂ ಶೀಘ್ರವೇ ಹೊಸ ಹೊಣೆಗಾರಿಕೆಗಳನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.
Next Story