ರಾಜ್ಯ ಪ್ರಶಸ್ತಿ ವಿಜೇತ ಕಂಸಾಳೆ ಮಹದೇವಯ್ಯ ನಿಧನ
ಮೈಸೂರು,ಮೇ.24: ಅನಾರೋಗ್ಯದಿಂದ ಬಳಲುತಿದ್ದ ರಾಜ್ಯ ಪ್ರಶಸ್ತಿ ವಿಜೇತ ಕಂಸಾಳೆ ಮಹದೇವಯ್ಯ (84) ಶನಿವಾರ ನಗರದ ಕ್ಯಾತಮಾರನಹಳ್ಳಿಯಲ್ಲಿ ನಿಧನರಾಗಿದ್ದಾರೆ.
ಮೃತರು ಮೂವರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು, ಸಹೋದರ ಕಂಸಾಳೆ ಪುಟ್ಟಮಾದು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಂಸಾಳೆ ಮಹದೇವಯ್ಯನವರು ರಾಜ್ಯ ಪ್ರಶಸ್ತಿ ವಿಜೇತರಾಗಿದ್ದರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಪ್ರಶಸ್ತಿ ಪಡೆದಿದ್ದರೂ ಇನ್ನೂ ಪ್ರಶಸ್ತಿ ಪತ್ರ ಕೈ ಸೇರಿಲ್ಲ ಎನ್ನಲಾಗಿದೆ.
Next Story