ಉಡುಪಿ ಜಿಲ್ಲೆಯಲ್ಲಿ ಮತ್ತೆ 10 ಕಂಟೇನ್ಮೆಂಟ್ ವಲಯ ಘೋಷಣೆ
ಉಡುಪಿ, ಮೇ 31: ಹೊರರಾಜ್ಯ ಮತ್ತು ಹೊರರಾಷ್ಟ್ರದಿಂದ ಬಂದು ಕ್ವಾರಂಟೈನ್ ಮುಗಿಸಿ ಮನೆಯಲ್ಲಿದ್ದವರಿಗೆ ಕೋವಿಡ್-19 ಸೋಂಕು ಇರು ವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೇ 31ರಂದು ಸೋಂಕಿತರು ವಾಸವಾಗಿ ರುವ ಒಟ್ಟು 10 ಪ್ರದೇಶಗಳನ್ನು ಸೀಲ್ಡೌನ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಅದರಂತೆ ಆಯಾ ತಾಲೂಕಿನ ತಹಶೀಲ್ದಾರರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರವಿವಾರ ನಿಗದಿತ ಪ್ರದೇಶಕ್ಕೆ ತೆರಳಿ ಸೋಂಕಿತರ ಮನೆ ಪರಿಸರದ ಸುತ್ತ ಬ್ಯಾರಿಕೇಡ್ ಮತ್ತು ಕೆಂಪು ಪಟ್ಟಿಯನ್ನು ಹಾಕಿ ನಿರ್ಬಂಧಿತ ಪ್ರದೇಶ ಎಂಬುದಾಗಿ ಘೋಷಿಸಿದೆ. ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಇಂದಿನ 10 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 27 ಕಂಟೇನ್ಮೆಂಟ್ ವಲಯ ಗಳನ್ನು ಘೋಷಣೆ ಮಾಡಲಾಗಿದೆ.
ಕಾರ್ಕಳ ತಾಲೂಕು: ಮಿಯ್ಯರು, ಇನ್ನಾ, ಮಾಳ ಮತ್ತು ನಲ್ಲೂರು ಗ್ರಾಮಗಳ ನಿಗದಿತ ಪ್ರದೇಶವನ್ನು ಕಂಟೇನ್ಮೆಂಟ್ ಮತ್ತು ಇಡೀ ಗ್ರಾಮ ಗಳನ್ನು ಬಫರ್ ಝೋನ್ಗಳಾಗಿ ಘೋಷಣೆ ಮಾಡಲಾಗಿದೆ.
ಮಿಯ್ಯರಿನಲ್ಲಿ ಮೂರು, ಇನ್ನಾದಲ್ಲಿ ಎರಡು, ಮಾಳ ಮತ್ತು ನಲ್ಲೂರಿನಲ್ಲಿ ತಲಾ ಒಂದು ಮನೆಗಳು ಕಂಟೆನ್ಮೆಂಟ್ ವಲಯದ ವ್ಯಾಪ್ತಿಗೆ ಬರುತ್ತವೆ. ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾ ನಂದ ಹಾಗೂ ಇತರ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಒಟ್ಟು ಈ ನಾಲ್ಕು ಸೇರಿದಂತೆ ಒಟ್ಟು ಆರು(ಪುರಸಭೆ ವ್ಯಾಪ್ತಿಯಲ್ಲಿ ಎರಡು) ಕಂಟೇನ್ಮೆಂಟ್ ಝೋನ್ಗಳಿವೆ.
ಉಡುಪಿ ತಾಲೂಕು: ಪೆರ್ಣಂಕಿಲ ಗ್ರಾಮದ ನಿಗದಿತ ಪ್ರದೇಶವನ್ನು ಕಂಟೆನ್ಮೆಂಟ್ ಹಾಗೂ ಇಡೀ ಗ್ರಾಮವನ್ನು ಬಫರ್ ರೆನ್ ಆಗಿ ಘೋಷಣೆ ಮಾಡಲಾಗಿದೆ. ಕಂಟೇನ್ಮೆಂಟ್ ಝೋನ್ನಲ್ಲಿ 11 ಮನೆ, 50 ಜನಸಂಖ್ಯೆ, ಒಂದು ಅಂಗಡಿ ಮತ್ತು ಬಫರ್ ರೆನ್ನಲ್ಲಿ 70 ಮನೆ, 864 ಜನ ಸಂಖ್ಯೆ ಹಾಗೂ ಒಂದು ಅಂಗಡಿ, ಒಂದು ಅಂಗನವಾಡಿ ಬರುತ್ತದೆ. ಹೀಗೆ ಉಡುಪಿ ತಾಲೂಕಿನಲ್ಲಿ ಒಟ್ಟು ಎರಡು(ತೆಂಕನಿಡಿಯೂರು ಗ್ರಾಮದ ಗರಡಿ ಮಜಲು) ಕಂಟೆನ್ಮೆಂಟ್ ಝೋನ್ಗಳಿವೆ.
ಬ್ರಹ್ಮಾವರ ತಾಲೂಕು: ಹಂದಾಡಿ ಗ್ರಾಮದ ಬೆಣ್ಣೆಕುದ್ರು ಅಂಗನವಾಡಿ ಸಮೀಪ ಕಂಟೇನ್ಮೆಂಟ್ ರೆನ್ ಮತ್ತು ಇಡೀ ಹಂದಾಡಿ ಗ್ರಾಮವನ್ನು ಬಫರ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಸದ್ಯ ಕಂಟೆನ್ಮೆಂಟ್ ರೆನ್ ವ್ಯಾಪ್ತಿಗೆ ಸೋಂಕಿತರ ಒಂದು ಮಾತ್ರ ಒಳಪಡುತ್ತದೆ. ಅಲ್ಲದೆ ಮನೆ ಯವರು ಕ್ವಾರಂಟೇನ್ನಿಂದ ಬಂದ ಈ ವ್ಯಕ್ತಿಯನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಿದ್ದರೆಂದು ತಿಳಿದುಬಂದಿದೆ. ಆದುದರಿಂದ ಮನೆಯ ಉಳಿದವರನ್ನು ಕ್ವಾರಂಟೇನ್ಗೆ ಒಳಪಡಿಸುವ ಅಗತ್ಯ ಇಲ್ಲ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಈ ಮೂಲಕ ಬ್ರಹ್ಮಾವರ ತಾಲೂಕಿನಲ್ಲಿ ಒಟ್ಟು ಐದು (ಹಂದಾಡಿ, ಕೋಟ ತಟ್ಟು, ವಂಡಾರು, ಹೇರೂರು, ವಡ್ಡರ್ಸೆ) ಗ್ರಾಮಗಳು ಕಂಟೆನ್ಮೆಂಟ್ ವಲಯಗಳಿವೆ.
ಕಾಪು ತಾಲೂಕು: ಬೆಳಪು ಗ್ರಾಮದ ನಿಗದಿತ ಪ್ರದೇಶವನ್ನು ಕಂಟೇನ್ ಮೆಂಟ್ ಮತ್ತು ಇಡೀ ಗ್ರಾಮವನ್ನು ಬಫರ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ ಸೋಂಕಿತರ ಸೇರಿದಂತೆ ಎರಡು ಮನೆಗಳು ಒಳಪಡುತ್ತದೆ.
ಪಾಂಗಾಳ ಗ್ರಾಮದ ಪಾಂಗಾಳಗುಡ್ಡೆಯ ಸೋಂಕಿತರ ಮನೆ ಸೇರಿದಂತೆ ಸುಮಾರು ಏಳೆಂಟು ಮನೆಗಳ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಮತ್ತು ಇಡೀ ಪಾಂಗಾಳ ಗ್ರಾಮವನ್ನು ಬಫರ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಕಾಪು ತಾಲೂಕಿನಲ್ಲಿ ಒಟ್ಟು ಮೂರು (ಮೂಡಬೆಟ್ಟು ಗ್ರಾಮದ ಸರಕಾರಿಗುಡ್ಡೆ) ಕಂಟೇನ್ಮೆಂಟ್ ವಲಯಗಳಿವೆ.
ಬೈಂದೂರು ತಾಲೂಕು: ಕಾಲ್ತೋಡು ಗ್ರಾಮದ ನಿಗದಿತ ಪ್ರದೇಶವನ್ನು ಕಂಟೇನ್ಮೇಂಟ್ ಮತ್ತು ಇಡೀ ಗ್ರಾಮವನ್ನು ಬಫರ್ ರೆನ್ ಆಗಿ ಘೋಷಣೆ ಮಾಡಲಾಗಿದೆ. ಕಂಟೆನ್ಮೇಂಟ್ ವಲಯದ ವ್ಯಾಪ್ತಿಯಲ್ಲಿ ಒಟ್ಟು ಮೂರು ಮನೆಗಳು ಬರುತ್ತವೆ. ಈ ಮೂಲಕ ಬೈಂದೂರು ತಾಲೂಕಿನಲ್ಲಿ ಒಟ್ಟು ಮೂರು(ಬಡಾ ಕೆರೆ, 11 ಉಳ್ಳೂರು) ಕಂಟೆನ್ಮೆಂಟ್ ಝೋನ್ಗಳಾಗಿವೆ.
ಕುಂದಾಪುರ ತಾಲೂಕಿನಲ್ಲಿ ಯಾವುದೇ ಸೋಂಕಿತರು ಕಂಡು ಬಾರದ ಹಿನ್ನೆಲೆಯಲ್ಲಿ ಇಂದು ಯಾವುದೇ ಕಂಟೇನ್ಮೆಂಟ್ ವಲಯಗಳ ಘೋಷಣೆ ಆಗಿಲ್ಲ. ಸದ್ಯ ಕುಂದಾಪುರ ತಾಲೂಕಿನಲ್ಲಿ ಒಟ್ಟು ಏಳು ಕಂಟೇನ್ಮೆಂಟ್ ವಲಯಗಳಿವೆ.
ಹೆಬ್ರಿ ತಾಲೂಕು: ನಾಡ್ಪಾಲು ಗ್ರಾಮದ ಮೇಗದ್ದೆ ಪ್ರದೇಶದ 50ಮೀಟರ್ ವ್ಯಾಪ್ತಿಯಲ್ಲಿ ಕಂಟೆನ್ಮೆಂಟ್ ಮತ್ತು ಇಡೀ ನಾಡ್ಪಾಲು ಗ್ರಾಮವನ್ನು ಬಫರ್ ರೆನ್ ಆಗಿ ಘೋಷಿಸಲಾಗಿದೆ. ಕಂಟೆನ್ಮೆಂಟ್ ವಲಯ ವ್ಯಾಪ್ತಿಯಲ್ಲಿ ಸೋಂಕಿತರ ಮನೆ ಸೇರಿದಂತೆ ಮೂರು ಮನೆಗಳು ಬರುತ್ತವೆ. ಸೋಂಕಿತರ ಮನೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದು ತಾಲೂಕಿನ ಪ್ರಮ ಕಂಟೇನ್ಮೆಂಟ್ ವಲಯ ಆಗಿದೆ.