ಉಪ್ಪಿನಂಗಡಿ, ಜೂ.2: ಇಲ್ಲಿಗೆ ಸಮೀಪದ ಕರಾಯ ನಿವಾಸಿ ಬಿ.ಅಬೂಬಕರ್ (63) ಮೇ 31ರಂದು ಹೃದಯಾಘಾತದಿಂದ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ.
ಅಬೂಬಕರ್ಮಂಗಳೂರು ಕೆಎಸ್ಸಾರ್ಟಿಸಿ ಡಿಪೋದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ 2 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಮೃತರು ಪುತ್ರ ಹಾಗೂ ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.