ಮೂಡುಬಿದಿರೆ : ಇಲ್ಲಿನ ಕಲ್ಸಂಕ ಪ್ರಭು ಕುಟುಂಬದ ಎಂ.ಭಗೀರಥ ಪ್ರಭು ಅವರ ಪುತ್ರ ಶರತ್ ಪ್ರಭು (41) ಹೃದಯಾಘಾತದಿಂದ ಜೂ. 25ರಂದು ರಾತ್ರಿ ನಿಧನ ಹೊಂದಿದರು.
ಮೂಡುಬಿದಿರೆ ಸ್ವರಾಜ್ಯ ಮೈದಾನ ರಸ್ತೆ ಬಳಿ ಓಂಕಾರ್ ಡಿಜಿಟಲ್ಸ್ ಸಂಸ್ಥೆಯ ಮಾಲಕರಾಗಿದ್ದ ಅವರು ಅವಿವಾಹಿತರಾಗಿದ್ದು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.