ಕೊರೋನ ಸೋಂಕಿತರ ಅಂತ್ಯಕ್ರಿಯೆ: ಝಮೀರ್ ಅಹ್ಮದ್ ಕಾರ್ಯಕ್ಕೆ ಸಿದ್ದರಾಮಯ್ಯ ಮೆಚ್ಚುಗೆ
ಬೆಂಗಳೂರು, ಜು.9: ಕೊರೋನ ಸೋಂಕಿನಿಂದ ಮೃತರಾದ 120ಕ್ಕೂ ಹೆಚ್ಚು ಮಂದಿಯ ಅಂತ್ಯಕ್ರಿಯೆಯನ್ನು ಅವರ ಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿ ನೆರವೇರಿಸಿರುವ ನಮ್ಮ ಪಕ್ಷದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಕಾರ್ಯ ಶ್ಲಾಘನೀಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ವ ಟ್ವೀಟ್ ಮಾಡಿದ್ದಾರೆ.
‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಇಂದು(ಜು.9) ಪ್ರಕಟವಾಗಿರುವ ವಿಶೇಷ ವರದಿಯನ್ನು ಉಲ್ಲೇಖಿಸಿ ಈ ಟ್ವೀಟ್ ಮಾಡಿರುವ ಅವರು, ಮೃತರ ಅಂತ್ಯಕ್ರಿಯೆಯನ್ನು ಸರಕಾರ ಮತ್ತು ಕುಟುಂಬಸ್ಥರೆ ನಿರ್ಲಕ್ಷಿಸುತ್ತಿರುವ ಸಂದರ್ಭದಲ್ಲಿ ಶಾಸಕರ ಪ್ರಯತ್ನ ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿನಿಂದ ಮೃತರಾದ 120ಕ್ಕೂ ಹೆಚ್ಚು ಮಂದಿಯ ಅಂತ್ಯಕ್ರಿಯೆಯನ್ನು ಅವರ ಧರ್ಮದ ಸಂಪ್ರದಾಯಕ್ಕೆ ಅನುಗಣವಾಗಿ ನೆರವೇರಿಸಿರುವ
— Siddaramaiah (@siddaramaiah) July 9, 2020
ನಮ್ಮ ಪಕ್ಷದ ಶಾಸಕ @BZZameerAhmedK ಕಾರ್ಯ ಶ್ಲಾಘನೀಯ.
ಮೃತರ ಅಂತ್ಯಕ್ರಿಯೆಯನ್ನು ಸರ್ಕಾರ ಮತ್ತು ಕುಟುಂಬಸ್ಥರೇ ನಿರ್ಲಕ್ಷಿಸುತ್ತಿರುವ ಸಂದರ್ಭದಲ್ಲಿ ಶಾಸಕರ ಪ್ರಯತ್ನ ಅನುಕರಣೀಯ. pic.twitter.com/v9NyuMN5bq
Next Story