ಪಾರದರ್ಶಕವಾಗಿದ್ದರೆ ಅದೇ ಆಸ್ಪತ್ರೆಯ ವೈದ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದೇಕೆ: ಈಶ್ವರ್ ಖಂಡ್ರೆ ಪ್ರಶ್ನೆ
ಬೆಂಗಳೂರು, ಜು. 10: `ವೈದ್ಯಕೀಯ ಶಿಕ್ಷಣ ಸಚಿವರೇ, ಬೌರಿಂಗ್ ಆಸ್ಪತ್ರೆಗೆ ನೂತನ ನಿರ್ದೇಶಕರ ನೇಮಕಾತಿ ಪಾರದರ್ಶಕವಾಗಿದ್ದಿದ್ದರೆ ಅದೇ ಆಸ್ಪತ್ರೆಯ ವೈದ್ಯರೇ ಆಕ್ಷೇಪ ವ್ಯಕ್ತಪಡಿಸಿ ನಿಮಗೇಕೆ ಪತ್ರ ಬರೆಯುತ್ತಿದ್ದರು?' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ, ಸಚಿವ ಡಾ.ಸುಧಾಕರ್ ಅವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ವೃಂದ ಮತ್ತು ನೇಮಕಾತಿ ನಿಯಮ ಉಲ್ಲಂಘಿಸಿ, ಎಂಸಿಐ ಕಣ್ಣು ತಪ್ಪಿಸಿ, ಸೇವಾ ಹಿರಿತನ ಕಡೆಗಣಿಸಿ ಬೇರೆ ಸಂಸ್ಥೆಯ ವೈದ್ಯರನ್ನೇ ನಿರ್ದೇಶಕರನ್ನಾಗಿಸುವುದು ಏಕೆ, ಇದು ಯಾರ ತುರ್ತು ಹಿತಾಸಕ್ತಿ ಉತ್ತರಿಸಿ' ಎಂದು ಕೇಳಿದ್ದಾರೆ.
Next Story