ಕಾರು ಪಲ್ಟಿಯಾದ್ದರಿಂದ ಸರಕಾರ ಉಳಿಯಿತು: ವಿಕಾಸ್ ದುಬೆ ಎನ್ ಕೌಂಟರ್ ಗೆ ಅಖಿಲೇಶ್ ಯಾದವ್ ಪ್ರತಿಕ್ರಿಯೆ
ಲಕ್ನೊ, ಜು.10: ಶುಕ್ರವಾರ ಬೆಳಗ್ಗೆ ಪೊಲೀಸರು ಎನ್ ಕೌಂಟರ್ ನಲ್ಲಿ ಪಾತಕಿ ವಿಕಾಸ್ ದುಬೆಯನ್ನು ಹತ್ಯೆ ಮಾಡಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಕಾರು ಪಲ್ಟಿಯಾದ್ದರಿಂದ ಸರಕಾರ ಉಳಿಯಿತು ಎಂದು ವ್ಯಂಗ್ಯವಾಡಿದ್ದಾರೆ.
ದುಬೆ ಸಾಯದಿದ್ದರೆ ಸರಕಾರದ ಕೆಲವು ರಹಸ್ಯಗಳು (ದುಬೆಗೆ ನೆರವಾಗುತ್ತಿದ್ದ ರಾಜಕಾರಣಿಗಳ ಮಾಹಿತಿ) ಬೆಳಕಿಗೆ ಬರುತ್ತಿದ್ದವು. ಆದ್ದರಿಂದಲೇ ದುಬೆಯನ್ನು ಕರೆದೊಯ್ಯುತ್ತಿದ್ದ ಕಾರನ್ನು ಪಲ್ಟಿ ಮಾಡಲಾಗಿದೆ ಎಂದು ಯಾದವ್ ಹೇಳಿದ್ದಾರೆ. ‘
ಎನ್ ಕೌಂಟರ್ ನ ಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ಉತ್ತರಪ್ರದೇಶದ ಬಿಜೆಪಿ ಸರಕಾರವು ಮುಗ್ಧ ಜನರ ಕಸ್ಟಡಿ ಸಾವುಗಳನ್ನು ನಿರ್ದಯವಾಗಿ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.
Next Story