ಜು.14ರಿಂದ ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಿಷೇಧ
ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ
ಉಳ್ಳಾಲ,ಜು.12: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಕೋವಿಡ್ 19 ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಿಷೇಧಿಸಲಾಗಿದೆ.
ಉಳ್ಳಾಲ, ಮಾಸ್ತಿಕಟ್ಟೆ, ತೊಕ್ಕೊಟ್ಟು ಒಳಪೇಟೆ, ತೊಕ್ಕೊಟ್ಟು, ಚೆಂಬು ಗುಡ್ಡೆ, ಪಂಡಿತ್ ಹೌಸ್, ಕಲ್ಲಾಪು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀನು, ತರಕಾರಿ, ಹಣ್ಣು ಹಂಪಲು, ಬೀದಿ ಬದಿ ವ್ಯಾಪಾರ ವಹಿವಾಟುಗಳನ್ನು ಜು.14ರಿಂದ ಜು.20 ವರೆಗೆ ಕರ್ನಾಟಕ ಮುನಿಸಿಪಲ್ ಆಕ್ಟ್ 1964ರಂತೆ ನಿಷೇಧಿಸಲಾಗಿದೆ ಎಂದು ನಗರ ಸಭಾ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.
Next Story