ಸಹಾಯಕರಲ್ಲಿ ಕೊರೋನ ವೈರಸ್: ಅಯೋಧ್ಯೆಯ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಕ್ವಾರಂಟೈನ್ ನಲ್ಲಿ
ಹೊಸದಿಲ್ಲಿ: ತಮ್ಮ ಇಬ್ಬರು ಸಹಾಯಕರಲ್ಲಿ ಕೊರೋನ ವೈರಸ್ ದೃಢಪಟ್ಟ ನಂತರ ಅಯೋಧ್ಯೆಯ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಸ್ವಯಂ ಕ್ವಾರಂಟೈನ್ ಗೊಳಗಾಗಿದ್ದಾರೆ.
ಸತ್ಯೇಂದ್ರ ದಾಸ್ ಕ್ವಾರಂಟೈನ್ ಗೊಳಗಾಗಿರುವ ಹಿನ್ನೆಲೆಯಲ್ಲಿ ಅವರ ಸಹಾಯಕ ಅಯೋಧ್ಯೆಯಲ್ಲಿ ಪ್ರಾರ್ಥನೆಗಳನ್ನು ನೆರವೇರಿಸಲಿದ್ದಾರೆ.
“ಜುಲೈ 30ರಂದು ನನ್ನ ಸಹಾಯಕರಲ್ಲೊಬ್ಬರಾದ ಪ್ರದೀಪ್ ದಾಸ್ ಕೊರೋನ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ 3 ದಿನಗಳ ಕಾಲ ದೇವಾಲಯ ಪ್ರವೇಶಿಸದಂತೆ ಟ್ರಸ್ಟ್ ನನಗೆ ಹೇಳಿದೆ” ಎಂದು ಸತ್ಯೇಂದ್ರ ದಾಸ್ ಹೇಳಿದ್ದಾರೆ. “ನಾನು ಭೂಮಿ ಪೂಜೆಯಲ್ಲಿ ಭಾಗಿಯಾಗದೆ ಇರುವ ಸಾಧ್ಯತೆ ಇದ್ದು, ಇತರ ಅರ್ಚಕರು ಪೂಜೆ ನೆರವೇರಿಸಲಿದ್ದಾರೆ” ಎಂದವರು ಮಾಹಿತಿ ನೀಡಿದ್ದಾರೆ.
Next Story